ಚುನಾವಣೆ ನಂತರ ಆರೆಸೆಸ್ಸಿನಲ್ಲಿ ಭಾರಿ ಸ್ಥಿತ್ಯಂತರ?
ಬೆಂಗಳೂರು, ಏಪ್ರಿಲ್ 16: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆ ದೇಶದಲ್ಲಿ ಏನೆಲ್ಲಾ ಸ್ಥಿತ್ಯಂತರಗಳು ಆಗಲಿವೆಯೋ!? ಶಿಸ್ತಿನ ಸಂಘಟನೆ ಆರೆಸೆಸ್ಸಿನಲ್ಲಂತೂ ಅದಾಗಲೇ ಕದಲಿಕೆಗಳು ಗೋಚರವಾಗುತ್ತಿವೆ.
ಹಾಲಿ ಚುನಾವಣೆ ಮುಗಿಯುತ್ತಿದ್ದಂತೆ ಆರೆಸ್ಸೆಸ್ ಸಂಘಟನೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಭಾರಿ ಸ್ಥಿತ್ಯಂತರಗಳು ನಡೆಯಲಿವೆ. ಮುಖ್ಯವಾಗಿ ಸಂಘಟನೆ ಮತ್ತು ಬಿಜೆಪಿ ಪಕ್ಷದ ನಡುವೆ ಹೆಚ್ಚು ಸಮನ್ವಯ ಕಾಯ್ದುಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೆಸ್ಸೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಬಿಜೆಪಿಯನ್ನು
ಅಧಿಕಾರಕ್ಕೆ
ತರಲು
ಸಾಕಷ್ಟು
ಶ್ರಮಿಸುತ್ತಿರುವ
ಆರೆಸ್ಸೆಸ್,
ಚುನಾವಣೆ
ಪ್ರಚಾರದಲ್ಲೂ
ಸಕ್ರಿಯವಾಗಿ
ತೊಡಗಿಸಿಕೊಂಡಿದೆ.
ಗುಜರಾತ್
ಮುಖ್ಯಮಂತ್ರಿ
ನರೇಂದ್ರ
ಮೋದಿ
ಅವರನ್ನು
ಬಿಜೆಪಿ
ಪ್ರಧಾನಿ
ಅಭ್ಯರ್ಥಿಯನ್ನಾಗಿ
ಆಯ್ಕೆ
ಮಾಡುವಲ್ಲಿ
ಸಂಘವು
ನಿರ್ಣಾಯಕ
ಪಾತ್ರವಹಿಸಿದೆ.
ಚುನಾವಣೆ
ಮುಗಿದು
ಫಲಿತಾಂಶ
ಏನೇ
ಆಗಿರಲಿ
ಆರೆಸ್ಸೆಸ್
ಹಲವು
ಬದಲಾವಣೆ
ಮಾಡುವ
ಮೂಲಕ
ಬಿಜೆಪಿಯೆನ್ನು
ಇನ್ನಷ್ಟು
ಸದೃಢಗೊಳಿಸಲು
ನಿರ್ಧರಿಸಿದೆ.
ಇದರ ಫಲಶ್ರುತಿಯಾಗಿ ಸೋನಿ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅಥವಾ ಸುರೇಶ್ ಭಯ್ಯಾಜಿ ಜೋಷಿ ಅವರನ್ನು ಸಂಚಾಲಕರಾಗಿ ನೇಮಿಸಲು ಆರೆಸ್ಸೆಸ್ ಉದ್ದೇಶಿಸಿದೆ. ಏತನ್ಮಧ್ಯೆ, ಸುರೇಶ್ ಸೋನಿ ಅವರು ಬಿಜೆಪಿಯಲ್ಲಿ ಸಕ್ರಿಯವಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.
ಎಬಿವಿಪಿಯ ಮಾಜಿ ಸಂಘಟನಾ ಕಾರ್ಯದರ್ಶಿ, ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಅನುಯಾಯಿ ದತ್ತಾತ್ರೇಯ ಹೊಸಬಾಳೆ ಅವರು ಸೋನಿ ಜಾಗಕ್ಕೆ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ದತ್ತಾತ್ರೇಯ ಅವರು ಮೋದಿ ಪ್ರತಿಪಾದಕರು ಎಂಬುದು ಗಮನಾರ್ಹ. ಅನೇಕ ಎಬಿವಿಪಿ ನಾಯಕರು ಬಿಜೆಪಿಯಲ್ಲಿ ಉನ್ನತ ಸ್ಥಾನಗಳನ್ನು ತಲುಪಿದ್ದಾರೆ. ಅನಂತಕುಮಾರ್, ನಿತಿನ್ ಗಡ್ಕರಿ ಅವರಲ್ಲಿ ಪ್ರಮುಖರು.
ಆದರೆ ಈ ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದಾಗ ಆರೆಸ್ಸೆಸ್ ಮುಖಂಡರಾದ ರಾಮ್ ಮಾಧವ್ ಅವರು ಅಂಥದ್ದೇನೂ ಇಲ್ಲ. ಇದೆಲ್ಲಾ ಗಾಳಿಸುದ್ದಿಯಷ್ಟೇ. ಚುನಾವಣೇ ನಂತರವೂ ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.