Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲ್ಯಾಣ ಗೀತೆಯಲ್ಲಿ 'ಮಾಯದಂಥ ಮಳೆ'
ಉರಿ ಬಿಸಿಲಿನಿಂದ ತತ್ತರಿಸುತ್ತಿರುವ ಚನ್ನಪಟ್ಟಣದಲ್ಲಿ 'ಮಾಯದಂಥ ಮಳೆ' ಬಂದಿದೆ. ಬೊಂಬೆನಗರದ ಸಮೀಪದಲ್ಲಿರುವ ದೇವರಹಳ್ಳಿಯಲ್ಲೂ ಮಳೆಯ ಸಿಂಚನ. ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಮಾಯದಂಥ ಮಳೆ ಚಿತ್ರಕ್ಕಾಗಿ ಕೆ.ಕಲ್ಯಾಣ್ ರಚಿಸಿರುವ 'ಕಂಡ ಹಾಗೆ ಅಲ್ಲ ಬಾಳು ದಾರಿ ಪೂರ ಏಳು ಬೀಳು ಎಲ್ಲಿ ಮೊದಲೊ ಎಲ್ಲಿ ಕೊನೆಯೊ ಇಲ್ಲಿ ಯಾರು ಬಲ್ಲರು' ಎಂಬ ಹಾಡಿನ ಚಿತ್ರೀಕರಣ ದೇವರಹಳ್ಳಿಯ ಡಿ.ಟಿ.ಜಯಕುಮಾರ್ ಹೌಸ್ನಲ್ಲಿ ನಡೆದಿದೆ.
ಶರತ್ಬಾಬು, ರೇಖಾ ವಿ ಕುಮಾರ್, ಭಾವನಾರಾವ್, ಪ್ರಕಾಶ್ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ಸುಂದರಶ್ರೀ ಮುಂತಾದ ಕಲಾವಿದರ ಅಭಿನಯದಲ್ಲಿ ಚಿತ್ರೀಕರಣಗೊಂಡ ಈ ಗೀತೆಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವೀರೇಶ್ ದೊಡ್ಡಬಳ್ಳಾಪುರ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಕವಿರಾಜ್, ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥರಾವ್ ರಚಿಸಿರುವ ಹಾಡುಗಳಿಗೆ ಮ್ಯೂಜಿಕ್ ಮೋಹನ್ ಸಂಗೀತ ನೀಡಿದ್ದಾರೆ. ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಕೆಂಪರಾಜ್ ಅವರ ಸಂಕಲವಿರುವ ಚಿತ್ರದ ತಾರಾಬಳಗದಲ್ಲಿ ನಾಗಕಿರಣ್, ರವಿಚೇತನ್, ಭಾವನಾರಾವ್, ರೂಪಿಕಾ, ಶರತ್ಬಾಬು, ಶೃತಿ, ಪ್ರಕಾಶ್ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾ ವಿ ಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು ಮುಂತಾದವರಿದ್ದಾರೆ.