ರಂಜಾನ್ ವ್ರತಭಂಗ ಮಾಡಲು ಚಪಾತಿ ತಿನ್ನಿಸಿದರು
ನವದೆಹಲಿ, ಜು. 23 : ರಂಜಾನ್' ಉಪವಾಸದಲ್ಲಿದ್ದ ಸಿಬ್ಬಂದಿಗಳಿಗೆ ಶಿವಸೇನಾ ಸಂಸದರು ಬಲವಂತವಾಗಿ ಚಪಾತಿ ತಿನ್ನಿಸಿದ ಪ್ರಕರಣ ಬುಧವಾರ ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು. ಶಿವಸೇನಾ ಸಂಸದರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸಿದರು.
ನವದೆಹಲಿಯಲ್ಲಿರುವ
ಮಹಾರಾಷ್ಟ್ರ
ಸದನದಲ್ಲಿ
ಶಿವಸೇನೆಯ
11
ಸಂಸದರು
ಜು.17ರಂದು
ಸಭೆ
ನಡೆಸುತ್ತಿದ್ದರು.
ಈ
ವೇಳೆ
ಸಂಸದರು
ತಮಗೆ
ಕಳಪೆ
ಗುಣಮಟ್ಟದ
ಊಟ
ನೀಡಲಾಗಿದೆ
ಮತ್ತು
ಮಹಾರಾಷ್ಟ್ರ
ಮಾದರಿ
ಊಟ
ನೀಡಿಲ್ಲ
ಎಂದು
ಆರೋಪಿಸಿ,
ರಂಜಾನ್
ವ್ರತಾಚರಣೆಯಲ್ಲಿದ್ದ
ಕ್ಯಾಟರಿಂಗ್
ಮೇಲ್ವಿಚಾರಕ
ಅರ್ಷದ್
ಜುಬೈರ್
ಗೆ
ಬಲವಂತವಾಗಿ
ಚಪಾತಿ
ತಿನ್ನಿಸಿದ್ದರು.
ಬುಧವಾರ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ ಸಂಸದರು ಒಬ್ಬ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ವರ್ತಿಸಿದ್ದಾರೆ ಎಂದರು. ಆರ್ ಜೆಡಿ, ಟಿಎಂಸಿ ಸಂಸದರು ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಬೆಂಬಲ ನೀಡಿ ಸದದಲ್ಲಿ ಗದ್ದಲವೆಬ್ಬಿಸಿದರು. [ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಅತ್ಯಾಚಾರ ಪ್ರಕರಣ]
ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮಾತಿಗೆ ಬೆಂಬಲ ನೀಡದ ಸದಸ್ಯರು ಗದ್ದಲ ಮುಂದುವರೆಸಿದಾಗ ಅನಿವಾರ್ಯವಾಗಿ ಮಧ್ಯಾಹ್ನದ ವರೆಗೆ ಕಲಾಪ ಮುಂದೂಡಬೇಕಾಯಿತು. ಚಪಾತಿ ತಿನ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜುಬೈರ್, ಶಿವಸೇನಾ ಸಂಸದರು ತನ್ನ ವ್ರತ ಭಂಗಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.