ಬಿಜೆಪಿ ಬಡವರ ಪಕ್ಷ, ಅವರ ಅಭಿವೃದ್ಧಿಗೆ ಕೆಲಸ ಮಾಡೋಣ
ನವದೆಹಲಿ, ಆ.9 : "ಒಬ್ಬ ಸಾಮಾನ್ಯ ಕಾರ್ಯಕರ್ತ ದೇಶದ ಪ್ರಧಾನಿಯಾಗಬಹುದು ಎಂಬುದನ್ನು ನರೇಂದ್ರ ಮೋದಿ ಅವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಸಾಮಾನ್ಯ ಕಾರ್ಯಕರ್ತ ಪಕ್ಷದ ಅಧ್ಯಕ್ಷನಾಗಿದ್ದೇನೆ" ಇದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ಬಿಜೆಪಿ ಸಾಮಾನ್ಯರ, ಬಡವರ ಪಕ್ಷ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶನಿವಾರ
ನವದೆಹಲಿಯಲ್ಲಿ
ನಡೆದ
ಬಿಜೆಪಿ
ಪರಿಷತ್
ಸಭೆಯಲ್ಲಿ
ಬಿಜೆಪಿ
ಹಿರಿಯ
ನಾಯಕರ
ಸಮ್ಮುಖದಲ್ಲಿ
ಅಮಿತ್
ಶಾ
ಪಕ್ಷದ
ರಾಷ್ಟ್ರಾಧ್ಯಕ್ಷರಾಗಿ
ಅಧಿಕಾರ
ಸ್ವೀಕರಿಸಿದರು.
ನಂತರ
ಸಭೆಯನ್ನು
ಉದ್ದೇಶಿಸಿ
ಮಾತನಾಡಿದ
ಅವರು,
ಬಿಜೆಪಿ
ಬಡವರ
ಪಕ್ಷ,
ಇದನ್ನು
ಬೆಂಬಲಿಸಿದರೆ
ಟೀ
ಮಾರುತ್ತಿದ್ದ
ವ್ಯಕ್ತಿ
ಪ್ರಧಾನಿಯಾಗುತ್ತಾರೆ
ಎಂದು
ಜನರು
ನಮಗೆ
ಬೆಂಬಲ
ನೀಡಿದ್ದಾರೆ
ಎಂದರು.
ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರಾದವರು ಉನ್ನತ ಹುದ್ದೆಗಳಿಗೆ ಏರಲು ಸಾಧ್ಯ ಎಂದು ಹೇಳಿದ ಅಮಿತ್ ಶಾ, ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಹಾಗೆಯೇ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ರಾಷ್ಟ್ರಾಧ್ಯಕ್ಷನಾಗಿದ್ದೇನೆ ಎಂದು ಶಾ ತಿಳಿಸಿದರು.
ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅಧ್ಯಕ್ಷಸ್ಥಾನ ನೀಡಿದ ಬಿಜೆಪಿ ನಾಯಕರಿಗೆ ನಾನು ಚಿರಋಣಿ ಎಂದು ಹೇಳಿದ ಅಮಿತ್ ಶಾ, ನನ್ನ ಮೇಲೆ ಭರವಸೆ ಇಟ್ಟು ನನಗೆ ಉನ್ನತ ಜವಾಬ್ದಾರಿ ವಹಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಖಂಡಿತ ಉಳಿಸುತ್ತೇನೆ ಎಂದು ಹೇಳಿದರು.
ಸಮರ್ಥ ಪ್ರಧಾನಿ ಸಿಕ್ಕಿದ್ದಾರೆ : ಕಾಂಗ್ರೆಸ್ ಪಕ್ಷದ ನಡೆಸಿದ ಹತ್ತು ವರ್ಷಗಳ ದುರಾಡಳಿತದಿಂದಾಗಿ ದೇಶ ಸ್ಥಿತಿ ಅಧೋಗತಿಗೆ ಹೋಗಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸುವ ದಕ್ಷ ಪ್ರಧಾನಿಯ ಅವಶ್ಯಕತೆ ದೇಶಕ್ಕೆ ಇತ್ತು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ ಅವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಕಾಣಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಾರೆ. ಅದೇ ರೀತಿ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುವುದು. ಅಂದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಂದ ಧ್ವಜಾರೋಹಣ ನಡೆಯಲಿದೆ ಎಂದು ಅಮಿತ್ ಶಾ ತಿಳಿಸಿದರು.