ಸಂಸದೆ ಡಿಂಪಲ್ ಕ್ಷೇತ್ರದಲ್ಲಿ ಹೀನಾಯ ಕೃತ್ಯ
ಕನೌಜ್(ಉತ್ತರಪ್ರದೇಶ), ಆ.19: ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ, ಕನೌಜ್ ಕ್ಷೇತ್ರದ ಸಂಸದೆ ಡಿಂಪಲ್ ಅವರ ಕ್ಷೇತ್ರದಲ್ಲಿ ಕಾಮುಕರು ಹೀನಾಯ ಕೃತ್ಯ ಎಸಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಅಕೆಯನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿದ ದಾರುಣ ಘಟನೆ ವರದಿಯಾಗಿದೆ.
ಗಾಜಿಯಾಬಾದಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ಕಣ್ಮುಂದೆ ಇರುವಾಗಲೇ ಕನೌಜ್ ನಲ್ಲಿ ಶಾಲಾ ಶಿಕ್ಷಕ ಸೇರಿದಂತೆ ಮೂವರು ದುಷ್ಕರ್ಮಿಗಳು 33 ವರ್ಷ ವಯಸ್ಸಿನ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 16 ಹಾಗೂ 17 ರ ನಡುವಿನ ರಾತ್ರಿಯಲ್ಲಿ ಈ ಕೃತ್ಯ ನಡೆದಿದ್ದು, ಅತ್ಯಾಚಾರದ ನಂತರ ಮಹಿಳೆಯನ್ನು ಬೆತ್ತಲೆಗೊಳಿಸಿ ಮರವೊಂದಕ್ಕೆ ಕಟ್ಟಿ ಹಾಕಲಾಗಿತ್ತು.
ಈ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಉಮಾರ್ದ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡು
ಒಬ್ಬ
ಆರೋಪಿಯನ್ನು
ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ಬಂಧಿತ
ಆರೋಪಿಯನ್ನು
ಗ್ರಾಮ
ಪಂಚಾಯಿತಿ
ಮುಖ್ಯಸ್ಥ
ಮಗ
ಎಂದು
ಗುರುತಿಸಲಾಗಿದೆ,
ಸ್ಥಳೀಯ
ಶಾಲೆಯೊಂದರಲ್ಲಿ
ಶಿಕ್ಷಕ
ವೃತ್ತಿಯಲ್ಲಿದ್ದಾನೆ.
ಸಂತ್ರಸ್ತ
ಮಹಿಳೆಯನ್ನು
ಸಮೀಪದ
ಆಸ್ಪತ್ರೆಗೆ
ಸೇರಿಸಲಾಗಿದ್ದು,
ಚಿಕಿತ್ಸೆ
ನೀಡಲಾಗುತ್ತಿದೆ.
ಗಾಜಿಯಾಬಾದಿನ ಘಟನೆ: ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು, ಚಲಿಸುತ್ತಿರುವ ವಾಹನದಿಂದ ರಸ್ತೆಯಲ್ಲಿಯೇ ಆಕೆಯನ್ನು ಎಸೆದು ಹೋಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ತೀವ್ರ ರಕ್ತಸ್ರಾವ, ನೋವಿನಿಂದ ಬಳಲುತ್ತಿದ್ದ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಸರಣಿ ಇಲ್ಲಿಗೆ ಮುಗಿದಿಲ್ಲ, ಕಳೆದ ಭಾನುವಾರ ಒಂದೇ ದಿನ ಎರೆಡರಡು ಅತ್ಯಾಚಾರ ಪ್ರಕರಣಗಳು ವರದಿಯಾಗಿತ್ತು. 60 ವರ್ಷದ ಮುದುಕನೊಬ್ಬ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ದೆಹಲಿಯ ನಿರ್ಭಯಾ ಪ್ರಕರಣದಂತೆ ಗಾಜಿಯಾಬಾದಿನ ಖೋಡಾ ಗ್ರಾಮದಲ್ಲಿ ಯುವತಿಯೋರ್ವಳನ್ನು ಅಪಹರಿಸಿದ್ದ ಕೀಚಕರು ಸಾಮೂಹಿಕವಾಗಿ ಆಕೆಯ ಮೇಲೆರಗಿದ್ದಾರೆ. ಅಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ಚಲಿಸುತ್ತಿರುವ ವಾಹನದಿಂದಲೇ ರಸ್ತೆಗೆ ಬಿಸಾಡಿದ್ದರು.
ಮುಂಜಾನೆ ರಸ್ತೆಯಲ್ಲಿ ಅರೆನಗ್ನಾವಸ್ಥೆಯಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಗಾಜಿಯಾಬಾದ್ ಪೊಲೀಸರು ಅತ್ಯಾಚಾರಗೈದ ದುಷ್ಕರ್ಮಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.