ಅಂಧ ಮಕ್ಕಳನ್ನು ಬೆತ್ತದಿಂದ ನಿರ್ದಯವಾಗಿ ಬಾರಿಸಿದ ಶಿಕ್ಷಕ
ಹತ್ತು ವರ್ಷಕ್ಕಿಂತ ಕೆಳಗಿನ ಮೂವರು ಅಂಧ ಮಕ್ಕಳ ಬೆನ್ನಿನ ಮೇಲೆ ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ ವ್ಯಕ್ತಿ ಹಿಗ್ಗಾಮುಗ್ಗಾ ಬಾರಿಸುತ್ತಿರುವ ಮೂರು ನಿಮಿಷಗಳ ವಿಡಿಯೋ ಹೃದಯ ಹಿಂಡುವಂತಿದೆ. ಈ ವಿಡಿಯೋ ತುಣುಕನ್ನು ಮೊಬೈಲ್ ಬಳಸಿ ಚಿತ್ರೀಕರಿಸಲಾಗಿದೆ.
ಆ
ಬಾಲಕನನ್ನು
ಥಳಿಸಲು
ಅನುಕೂಲವಾಗಲೆಂದು
ಮತ್ತೊಬ್ಬ
ವ್ಯಕ್ತಿ
ಬಾಲಕನನ್ನು
ಗಟ್ಟಿಯಾಗಿ
ಹಿಡಿದುಕೊಂಡಿದ್ದಾನೆ.
ಕಪ್ಪು
ಕನ್ನಡಕ
ಧರಿಸಿದ್ದ
ವ್ಯಕ್ತಿ
ಬೆತ್ತ
ಹಿಡಿದುಕೊಂಡು
ಬಾರಿಸುತ್ತಿರುವ
ದೃಶ್ಯ
ಎಂಥವರನ್ನೂ
ಮನಕಲಕುವಂತೆ
ಮಾಡುತ್ತದೆ.
ಈ
ರೀತಿ
ನಿರ್ದಯವಾಗಿ
ಥಳಿಸಲು
ಕಾರಣವಾದರೂ
ಏನು
ಎಂಬುದು
ತನಿಖೆಯಿಂದ
ತಿಳಿದುಬರಬೇಕಿದೆ.
ಬಾಲಕನ ಶರ್ಟನ್ನು ಹಿಡಿದು ಎಳೆದಾಡಿದ (ಅ)ಶಿಕ್ಷಕ ಆತನ ತಲೆಯನ್ನು ಗೋಡೆಗೆ ಘಟ್ಟಿಸಿದ್ದಾನೆ. ನೋವನ್ನು ತಡೆಯಲಾರದೆ ಬಾಲಕ ಬೆತ್ತವನ್ನು ಹಿಡಿದು, ಹೊಡೆಯಬೇಡಿರೆಂದು ಗೋಗರೆಯುತ್ತಿದ್ದರೂ ಕೇಳದ ಶಿಕ್ಷಕ ಬೆತ್ತವನ್ನು ಕಸಿದುಕೊಂಡು ಮನಸೋಯಿಚ್ಛೆ ಹೊಡೆದಿದ್ದಾನೆ. [ವಿಬ್ ಗಯಾರ್ ಪ್ರಕರಣ : ಆರೋಪಿ ಮುಸ್ತಫಾ ಬಂಧನ]
ಕಾಕಿನಾಡದ ಪೊಲೀಸರ ಪ್ರಕಾರ, ಈ ಘಟನೆ ಗ್ರೀನ್ಫೀಲ್ಡ್ ವಸತಿ ಶಾಲೆಯಲ್ಲಿ ನಡೆದಿದ್ದು, ಮಕ್ಕಳನ್ನು ಮನಬಂದಂತೆ ಥಳಿಸಿದ ವ್ಯಕ್ತಿ ಮತ್ತು ಶಾಲೆಯ ಪ್ರಿನ್ಸಿಪಾಲ್ರನ್ನು ಬಂಧಿಸಲಾಗಿದೆ. ರಾಜ್ಯದ ಮಕ್ಕಳ ಹಕ್ಕು ಸಮಿತಿ ಈ ಘಟನೆಯ ತನಿಖೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದೆ. ವಸತಿ ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.
ಶಿಕ್ಷಕನನ್ನು ಥಳಿಸಿದ ಪೋಷಕರು : ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಶಾಲೆಗೆ ನುಗ್ಗಿದ ಮಕ್ಕಳ ಪೋಷಕರು ಶಿಕ್ಷಕನನ್ನು ಮತ್ತು ಮ್ಯಾನೇಜರನ್ನು ಹಿಡಿದು ಯದ್ವಾತದ್ವಾ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.