ಈ ಬಾರಿ ಬೆಂಗಳೂರಿನ ತಂಡವೇ ಇಲ್ಲ
ಕಳೆದ ಬಾರಿ ಎರಡು ಬೆಂಗಳೂರು ತಂಡವಿತ್ತು. ಈ ಬಾರಿ ಬೆಂಗಳೂರಿನ ಒಂದು ತಂಡವೂ ಇಲ್ಲದಿರುವುದು ಅಚ್ಚರಿಯಾಗಿದೆ. ಜತೆಗೆ ದಾವಣಗೆರೆ ಡೈಮಂಡ್ಸ್, ಸಂಸದ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಮಲ್ನಾಡ್ ಗ್ಲಾಡಿಯೇಟರ್ಸ್ ತಂಡವನ್ನು ಕೈಬಿಡಲಾಗಿದೆ.
* ಉಳಿದಂತೆ ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್ ಹಳೆ ತಂಡಗಳು ಮರಳಿವೆ.
* ಹೊಸ ತಂಡಗಳು: ಟೀಮ್ ಮೈಸೂರು, ಹುಬ್ಬಳ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್, ರಾಕ್ ಸ್ಟಾರ್ಸ್(ಕಿಚ್ಚ ಸುದೀಪ್ ಚಿತ್ರ ತಂಡ). 2009ರಲ್ಲಿ ಕೊನೆ ಬಾರಿಗೆ ಕೆಪಿಎಲ್ ಆಡಲಾಗಿತ್ತು.
ಕೆಪಿಎಲ್ ವೇಳಾಪಟ್ಟಿ, ಲೋಗೋ ಪ್ರಕಟ
* ಆಗಸ್ಟ್ 28 ರಿಂದ ಸೆಪ್ಟೆಂಬರ್ 3 : ಮೈಸೂರು
* ಸೆಪ್ಟೆಂಬರ್ 5 ರಿಂದ 7 : ಬೆಂಗಳೂರು
* ಸೆಪ್ಟೆಂಬರ್ 9 ರಿಂದ 12 : ಹುಬ್ಬಳ್ಳಿ
* ಆಗಸ್ಟ್ 7 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
* ಪ್ರತಿ ನಿತ್ಯ ಎರಡು ಪಂದ್ಯಗಳು ನಡೆಯಲಿವೆ. ಇಂಡಿಯನ್ ಪ್ರಿಮಿಯರ್ ಲೀಗ್ ಮಾದರಿಯಲ್ಲಿ 4 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಪಂದ್ಯ ನಡೆಯುವ ಸಾಧ್ಯತೆಯಿದೆ.
ಹೊಸ ತಂಡಗಳು ಹಾಗೂ ಮಾಲೀಕರ ವಿವರ
* ಮಂಗಳೂರು ಯುನೈಟೆಡ್: ಫಿಜಾ ಡೆವಲಪರ್ಸ್ ಹಾಗೂ ಇಂಟರ್ ಟ್ರೇಡ್ ಪ್ರೈ.ಲಿ
* ಬೆಳಗಾವಿ ಪ್ಯಾಂಥರ್ಸ್: ಸುಭಾಷ್ ಎಂಟರ್ ಪ್ರೈಸಸ್ ಹಾಗೂ ಸಂಗೀತಾ ಕನ್ಸೋರ್ಟಿಯಂ
* ಬಿಜಾಪುರ ಬುಲ್ಸ್: ವಿವಿಡ್ ಕ್ರಿಯೇಷನ್ಸ್
* ಟೀಂ ಮೈಸೂರು: ಎನ್ ರಂಗರಾವ್ ಅಂಡ್ ಸನ್ಸ್
* ಹುಬ್ಳಿ ಟೈಗರ್ಸ್ : ಸುಶೀಲ್ ಜಿಂದಾಲ್
* ಬಳ್ಳಾರಿ ಟಸ್ಕರ್ಸ್: ಭಾಗ್ಯಲಕ್ಷ್ಮಿ ಹಾಗೂ ವೆಂಕಟೇಶ್ ರೆಡ್ಡಿ
* ರಾಕ್ ಸ್ಟಾರ್ಸ್ : ಸುದೀಪ್
ಮಂತ್ರಿ ಕೆಪಿಎಲ್ ಈಗ ಒಡೆಯರ್ ಕೆಪಿಎಲ್
ಈ ಮುಂಚೆ ಮಂತ್ರಿ ಕೆಪಿಎಲ್ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ಪ್ರಿಮಿಯರ್ ಲೀಗ್ ಟ್ವಿಂಟಿ20 ಕ್ರಿಕೆಟ್ ಟೂರ್ನಿ ಇನ್ಮುಂದೆ ಒಡೆಯರ್ ಕೆಪಿಎಲ್ ಎಂದೆನಿಸಲಿದೆ. ಮಂಗಳೂರು ಯುನೈಟೆಡ್ ಹಾಲಿ ಚಾಂಪಿಯನ್ ಆಗಿದ್ದಾರೆ. ಮೊದಲ ಸೀಸನ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಸೋಲಿಸಿ ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ) ತಂಡ ಕಪ್ ಎತ್ತಿತ್ತು. ಬೆಂಗಳೂರು ಗ್ರಾಮೀಣ ತಂಡ ಎರಡು ಸೀಸನ್ ನಲ್ಲೂ ಸೆಮಿಫೈನಲ್ ತಲುಪಿತ್ತು.