ನಾವಿಕ ವಿಶ್ವ ಕನ್ನಡ ಸಮಾವೇಶ ಉದ್ಘಾಟನೆ
ನಾವಿಕ ಬಾಸ್ಟನ್ ನ ವಿಶ್ವ ಕನ್ನಡ ಸಮಾವೇಶದ ಎರಡನೇ ದಿನ ಔಪಚಾರಿಕ ಉದ್ಘಾಟನಾ ಸಮಾರಂಭ ನಡೆಯಿತು. ಕರ್ನಾಟಕದ ಸಾರಿಗೆ ಮಂತಿಗಳಾದ ರಾಮಲಿಂಗ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಮುಂಜಾನೆ ವೂಸ್ಟರ್ ಮಹಾನಗರದ ಪುರಭವನದಿಂದ ಡಿ.ಸಿ.ಯು ಸಭಾಂಗಣಕ್ಕೆ ಸುಂದರ ಮೆರವಣಿಗೆಯಲ್ಲಿ ಹಲವು ಕನ್ನಡ ಕೂಟಗಳು ಭಾಗವಹಿಸಿದ್ದವು. ವಿವಿಧ ಧಿರಿಸು, ಡೊಳ್ಳು ಕುಣಿತ, ಯಕ್ಷಗಾನ, ಬಾವುಟಗಳಿಂದ ಕೂಡಿದ ಈ ಮೆರವಣಿಗೆಯಲ್ಲಿ ಕನ್ನಡ ಚಲನಚಿತ್ರ ತಾರೆಯರಾದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡಾ ಭಾಗವಹಿಸಿದ್ದರು.
ನಂತರದ ಉದ್ಘಾಟನಾ ಸಮಾರಂಭದಲ್ಲಿ ಸಂಚಾಲಕರಾದ ಶರಣಬಸವ ರಾಜೂರ ಮತ್ತು ಕೃಪಾ ರಾಜೂರ ಅವರು ಎಲ್ಲರನ್ನೂ ಸ್ವಾಗತಿಸಿದರು. ನಾವಿಕ ಅಧ್ಯಕ್ಷ ಕೇಶವ ಬಾಬು ಅವರು ಗಣ್ಯರನ್ನು ವೇದಿಕೆಯ ಮೇಲೆ ಬರಮಾಡಿಕೊಂಡರು.
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಮುಖ್ಯಮಂತ್ರಿ
ಚಂದ್ರು,
ಎನ್.ಆರ್.ಐ
ಫೋರಮ್
ನ
ಗಣೇಶ್
ಕಾರ್ಣಿಕ್,
ಉದ್ಯಮಿ
ಗುರುರಾಜ
ದೇಶಪಾಂಡೆ,
ಜಯಶ್ರೀ
ದೇಶಪಾಂಡೆ,
ಸಾಹಿತಿ
ವೀರಣ್ಣ
ರಾಜೂರ,
ನಾವಿಕ
ಕೇಂದ್ರ
ಮಂಡಳಿಯ
ರಾಮಪ್ಪ,
ವಿಜಯ್
ಕೊಟ್ರಪ್ಪ,
ಚಲನಚಿತ್ರ
ತಾರೆಯರಾದ
ಯಶ್
ಮತ್ತು
ರಾಧಿಕಾ
ಪಂಡಿತ್,
ವೂಸ್ಟರ್
ನಗರದ
ಮೇಯರ್
ಜೋಸೆಫ್
ಪೆಟ್ಟಿ,
ಅತಿಥೇಯ
ಕನ್ನಡ
ಕೂಟದ
ಅಧ್ಯಕ್ಷರಾದ
ಮಧುಸೂಧನ್
ಅಕ್ಕಿಹೆಬ್ಬಾಳ್
ಮತ್ತು
ದಿನೇಶ್
ಹರ್ಯಾಡಿ
ಅವರು
ವೇದಿಕೆಯ
ಮೇಲೆ
ಉಪಸ್ಥಿತರಿದ್ದರು.
ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಭ ಸಂದೇಶ ತಿಳಿಸಿ ಈ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು. ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಭಾಷಣದಲ್ಲಿ ಹೊರನಾಡ ಕನ್ನಡಿಗರು, ಕನ್ನಡ ಮತ್ತು ಸಂಸ್ಕೃತಿಯ ಜತೆ ನಂಟನ್ನು ಬಲಗೊಳಿಸಲು ಕರೆ ಕೊಟ್ಟರು. ಗಿರೀಶ್ ಕಾರ್ನಾಡ್ ಅವರು ತಮ್ಮ ವೀಡಿಯೋ ಸಂದೇಶದಲ್ಲಿ ಸಮಾವೇಶಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ "ಸೌರಭ" ಎಂಬ ಸ್ಮರಣ ಸಂಚಿಕೆಯನ್ನು ವೀರಣ್ಣ ರಾಜೂರ ಅವರು ಬಿಡುಗಡೆ ಮಾಡಿದರು.
ನಾವಿಕ ಬಾಸ್ಟನ್ ನ ವಿಶ್ವ ಕನ್ನಡ ಸಮಾವೇಶಕ್ಕೆ ಸುಮಾರು ಎರಡೂವರೆ ಸಾವಿರ ಕನ್ನಡಿಗರು ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದಾರೆ. ಬೋಸ್ಟನ್ ನಲ್ಲಿ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಹೊಯ್ಸಳ ಕನ್ನಡ ಕೂಟದ ಸಹಯೋಗದಲ್ಲಿ 2ನೇ 'ನಾವಿಕ' ವಿಶ್ವ ಕನ್ನಡ ಸಮಾವೇಶ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ಯಶಸ್ವಿಯಾಗಿ ಆಯೋಜನೆಗೊಂಡಿತ್ತು.