ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತನಾ ಅವರ ಕವನ :ನೆನಪು..

By Staff
|
Google Oneindia Kannada News

Nenapu, Chethana poem
*ಚೇತನಾ, ಜರ್ಮನಿ

ಅಂದು ಮಧ್ಯಾಹ್ನ ಮಳೆಗೇಕೋ ಅರಿವಿಲ್ಲ
ನೆನೆದವರ ಪರವಿಲ್ಲ
ಯಾರೋ ಗುನುಗುತ್ತಿದ್ದ ಪ್ರೇಮಿ
ನನಗೇಕೋ ಚಿತ್ತಚಂಚಲ

ಕಣ್ಣೆಲ್ಲ ಮಂಜು,ಮಳೆಹನಿ
ರೆಪ್ಪೆಯೊಳಗೆ ಹೊರಟು ನಿಂತ ನೀನು..
ಮತ್ತೆ ಭಾವನೆ..
ಅದಕ್ಕಿಂತ ಭಾರ

ನಿಂತೆ ! ಕುಸಿದಂತೆ ಭೂಮಿ !
ಮತ್ತದೇ ತವಕ,ಹೋಗಲಾರೆನೋ ಎಂದು
ಸಾವರಿಸಿ ಓಡಿದ್ದ ನನಗೆ
ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ

ಮುಸುಕಿದ್ದು ಧೂಳು,ಚಲಿಸಿದ್ದು ರೈಲು
ಅಲ್ಲೆಲ್ಲ ನೀರವತೆ, ನಿಶ್ಯಬ್ದ !
ಮರೆಯಾದರೂ ನಿನ್ನದೇ ನೆನಪು
ಮತ್ತೆಲ್ಲ ಸ್ತಬ್ಧ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X