ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭದ್ರತೆ
* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ
ಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟು
ಹೇಡಿಯಾಗಿ ಬಿದ್ದಿಹ ಹೊಲವಾಗಬೇಡ
ಇನ್ನೂ ಬೇಲಿಯನು ನಂಬುವುದು ಬೇಡ
ಕಳ್ಳ
ಪೋಲೀಸನಿಗೆ
ಹೇಳಿದ್ದಾನೆ
'ಕಳುವು
ಮಾಡಲಿಕ್ಕಿದೆ
ಇಂದು
ರಾತ್ರಿ
ಕಾವಲುಗಾರನ
ಹಿಡಿದು
ಕಟ್ಟಿಡು"
ಎಂದು
ಪಾಪದ
ಕಾವಲುಗಾರ
ಇಂದು
ರಜ
ಹಾಕಿದ್ದಾನೆ
ಕೆಲಸದರ್ಜಿಯಲಿ
ಭಾವಚಿತ್ರವಿಡದ
ಹುಡುಗಿಯರೇ
ಫೋಟೋ
ಲಗತ್ತಿಸದಿರೆ
ಇಲ್ಲಿ
ಕೆಲಸ
ಖಾಲಿ
ಇಲ್ಲ
ಮುಖಕ್ಕೆ
ಮಣೆಹಾಕುವವರ
ಕಂಡು
ರೇಜಿಗೆಪಟ್ಟರೆ
ಮಣೆ
ಹಾಕಿದ
ಮುಖದೆದುರು
ಮಂಗಳಾರತಿ
ಭಸ್ಮ
ಶಾಂತಲಾ ಭಂಡಿಯವರ ಸಣ್ಣಕಥೆ 'ಕೊನೆಕುಯಿಲು'
Comments
Story first published: Saturday, January 24, 2009, 16:32 [IST]