ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ

By Staff
|
Google Oneindia Kannada News

Ventak, Singapore
* ವೆಂಕಟ್‌, ಸಿಂಗಪುರ

ಮೌನದೊಳಗೆ
ಮನೆ ಮಾಡಿದೆ ಮನವು
ಎದೆಯ ಕದವ ತಟ್ಟಿ,
ಕರೆದರೂ.. ಓ ಗೊಡದೆ ಅಡಗಿದೆ
ಎಲ್ಲೂ ಕೊಡದೆ ಸುಳಿವು

ಕವಿದಿದೆ ಕಗ್ಗತ್ತಲ ಮೋಡದೊಳಗೆ
ಅರಿಯೆ, ಏಕೋ ಇಲ್ಲ ಸಲ್ಲದ ಕೋಪ
ಮಿಂಚು- ಗುಡುಗುಗಳ ಆರ್ಭಟದ
ಕಣ್ಣು ಮುಚ್ಚಾಲೆಯಲ್ಲಿ
ಅವಿತು ಕೊಂಡಿದೆಯೊ ... ಕಾದುಕೊಂಡು
ಮುಂದೆ ಬೆಳಗಬಹುದೆಂದು ಆಶಾದೀಪ

ತಿಳಿ ಹೇಳಬಯಸಿದ್ದೇನೆ,
ಕತ್ತಲು-ಬೆಳಕು
ಮಿಂಚು-ಗುಡುಗು-ಮಳೆಯು ಪ್ರಕೃತಿಯ
ನಿಯಮ
ಬೆಳೆಸಿಕೊಳ್ಳಬೇಕು ನೀನೊಂದಿಷ್ಟು
ಸಹನೆ-ಸಂಯಮ

ಅರ್ಥವಾಯಿತೆನೋ,
ಜೊತೆಗೂಡುವೆನೆಂದು ಆಶ್ವಾಸನೆಯಲ್ಲಿ
ಕದವ ತೆರೆದಿದೆ,
ಜೀವನದ ಪ್ರತಿಕ್ಷಣವ ಹಸಿರಾಗಿಸುವ
ಉತ್ಸಾಹದಲ್ಲಿ ಮತ್ತೆ ನನ್ನ ಜೊತೆಗೂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X