[an error occurred while processing this directive][an error occurred while processing this directive][an error occurred while processing this directive]
 ಮುಖಪುಟ  »  ಎನ್ಆರ್ಐ »  ಕವನ ಸಿಂಚನ

ಆಹಾ ಕವಿ ಕೇಸರಿ!
ಗುರುವಾರ, ಜನವರಿ 1, 1970 Hrs (IST)      ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ     ಸಿಟಿಜನ್ ಜರ್ನಲಿಸಂ   



ಆಹಾ ಕವಿ ಕೇಸರಿ!
Atal Behari Vajpayee, PM, Indiaರಾಜಕೀಯ ಮುತ್ಸದ್ಧಿಯೂ ಕವಿಯೂ ಆದ ಭಾರತದ ಪ್ರಧಾನಿ ವಾಜಪೇಯಿ ನ್ಯೂಯಾಕ್‌ನಲ್ಲಿನ ಭಾರತೀಯ ಸಾಹಿತ್ಯ ಸಮ್ಮೇಳನದ ಕೇಂದ್ರಬಿಂದು. ಸಾಹಿತ್ಯ ಸಮ್ಮೇಳನಕ್ಕೆ ಮುನ್ನವಷ್ಟೇ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್‌ ಅವರೊಂದಿಗೆ ಮಾತಿನ ಕಿಡಿಗಳನ್ನು ವಿನಿಮಯ ಮಾಡಿಕೊಂಡಿದ್ದ ವಾಜಪೇಯಿ, ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ ಹದಿನಾರಾಣೆ ಕವಿ. ಎಲ್ಲ ವೇದಿಕೆಗಳಿಗೂ ಹೊಂದಿಕೊಳ್ಳಬಲ್ಲ ವಾಜಪೇಯಿ ಸಮ್ಮೇಳನದಲ್ಲಿ ಮಿಂಚಿದ ಸಂದರ್ಭದಲ್ಲಿ ವಾಜಪೇಯಿ ಅವರ ಸ್ಥಿತಿಗತಿ ಹಾಗೂ ವ್ಯಕ್ತಿತ್ವಗಳ ಚಿತ್ರಿಸುವ ಇಲ್ಲಿನ ‘ಭರತಖಂಡ ಪ್ರಧಾನ ’ ಕವಿತೆ ಎಷ್ಟೊಂದು ಮಾರ್ಮಿಕವಾಗಿದೆ, ನೀವೇ ಓದಿ.
Ravikrishna Reddyಭರತಖಂಡ ಪ್ರಧಾನ !!

ಪರದೇಶಿ ‘ದೇವಿದಾಸ’ರಿಗೆಲ್ಲ ಅಡ್ಡಕಷ್ಟ
ಮೂ(ರ್‌)ದೇವಿಗಳಿಂದ ಆಗಾಗ ಸಂಕಷ್ಟ
ಮಾಯಾ ಜಯಾ ಮಮತಾ, ತಾತಾ!!!
ಹಗಲಿರುಳು ಬರೀ ತ್ರಿದೇವೀ ಸ್ತೋತ್ರಾ।।

ಎಡಕೆಂಪಿಂದ ಬಲಕೇಸರಿಗೆ
ಸುಲಲಿತ ಯೌವನ ಯಾನ
ತ್ರಿಶೂಲ ಕಾವಿ ಭುಜಬಲ
ವಿರೋಧಿಗಳೆಲ್ಲ ನಿರ್ಬಲ!

ರಂಜಿಪರಿಲ್ಲದ ವೇದಿಕೆಗೆ ತಕ್ಕ
ಜನ ಮನ ರಂಜಕ ವಾಕ್ಕು!
ಜೊತೆ ಬಂದ ಅವಕಾಶಿಗಳೋ
ಅನೀತಿ ವೃದ್ಧನಾರೀ ಗರತಿಯರು!!

ಅಂದದ್ದೇನೊ ನಿಜ ಜೈ ವಿಜ್ಞಾನ
ಹೋದದ್ದಿಲ್ಲ ಮನೆಯ ಜೋ(ತಿ)ಷಿಗಳ ಅಜ್ಞಾನ!
ಇನ್ನೊಂದೂ ದಿಟ, ಕಟ್ಟಲಿಲ್ಲಾ ತಾಳಿ
ತಾಳೀ(?). (ದತ್ತು) ಅಳಿಯನಿಲ್ಲವೆ ಮನೆಯಲ್ಲಿ ?

ಪುರಾಣ ಪಠಣ ಬದನೆ ಗೋ ‘ತಿಂದ’!
ಗೋವಿಂದಾ! ಆಚಾರಿ! ಗೋ ‘ಮುಖವಾಡ’.
ಬಾಲಕವಿ, ಪದ್ಯದೊಳ್‌ ಸರ್ವಾಲಂಕಾರ
ಭೂಷಿತೆ ಭಾರತಿ, ಅಪ್ರಿಯ ಸತ್ಯಂ ನ ಭ್ರೂ....

ಕೆಂಪುಕೃಷ್ಣಂಗೆ ಕೆಂಪುಕೋಟೆಯ ಕನಸು
ನವ ವಾನರರಿಗೆ ಜನರಕ್ತ ಮಾಂಸದ ತಿನಿಸು
ದೇಶಭದ್ರವೊ? ಪರ್ಯಾಯ ನಿರ್ಜನ!
ವಿಘ್ನಗಳಿದ್ದರೇನು? ಭರತಖಂಡ ಪ್ರಧಾನ!




ಮುಖಪುಟ / ಎನ್‌ಆರ್‌ಐ



User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login


 [an error occurred while processing this directive]
[an error occurred while processing this directive]