ಸಿಲಿಕಾನ್ ವೇಫರ್ ಮೇಲೆ ಭಗವದ್ಗೀತೆ!
* ಟಿ. ಮಹದೇವ ರಾವ್, ರಾಚೆಸ್ಟರ್, ನ್ಯೂ ಯಾರ್ಕ್
ಮಾನವ ಪ್ರಜ್ಞಾವಂತನಾದ ದಿನದಿಂದ ಜ್ಞಾನವನ್ನು ತನ್ನ ಮುಂದಿನ ಪೀಳಿಗೆಗಳಿಗೆ ತಲುಪಿಸಲು ಬೇರೆ ಬೇರೆ ವಿಧಾನಗಳನ್ನು ಕಂಡುಹಿಡಿಯುತ್ತಲೇ ಇದ್ದಾನೆ. ಜ್ಞಾನವು ಗುರು ಮುಖೇನ ಶಿಷ್ಯ ಪರಂಪರೆಗೆ ವಹನವಾಗುತ್ತಿತ್ತು. ಜ್ಞಾನ ಬಾಹುಳ್ಯ ಹೆಚ್ಚಾದಂತೆಲ್ಲ, ಅದನ್ನು ಪುಸ್ತಕ ರೂಪದಲ್ಲಿ ಬರೆದಿಡುವ ಅವಶ್ಯಕತೆ ಉಂಟಾಯಿತು. ಕಾಗದದ ಆವಿಷ್ಕಾರದ ಮೊದಲು, ತಾಳೆಯಗರಿ, ಗಿಡದ ತೊಗಟೆಗಳೇ ಬರಹದ ಮಾಧ್ಯಮ. ಅಶೋಕ, ಕೃಷ್ಣದೇವರಾಯನಂಥ ರಾಜ ಮಹಾರಾಜರು, ಬಂಡೆಗಳ ಮೇಲೆ, ಗುಹಾಂತರ್ದೇವಾಲಯಗಳಲ್ಲಿ, ತಾಮ್ರಪಟಗಳ ಮೇಲೆ, ತಮ್ಮ ಶಾಸನಗಳನ್ನು ಕೊರೆಯಿಸಿದರು. ಈ ಪ್ರಾಚೀನ ಶಾಸನಗಳು, ಸಂಸ್ಕೃತ, ಪ್ರಾಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಗುತ್ತವೆ. ಜಗತ್ತಿನಾದ್ಯಂತ ವಿಶ್ವ ವಿದ್ಯಾಲಯಗಳ ಗ್ರಂಥ ಭಂಡಾರಗಳಲ್ಲಿ, ಖಾಸಗೀ ಗ್ರಂಥ ಸಂಗ್ರಹಗಳಲ್ಲಿ, ಸಾವಿರಾರು ಪುರಾತನ ಗ್ರಂಥಗಳು ಲಭ್ಯವಿವೆ. ಈ ಶಿಲಾಶಾಸನಗಳು, ತಾಮ್ರ ಶಾಸನಗಳು, ಓಲೆಗರಿಯ ಗ್ರಂಥಗಳು, ಮಾನವನ ನಿರ್ಲಕ್ಷ್ಯ, ವಿಧ್ವಂಸಕ ಕೃತ್ಯಗಳು, ಕಾಲರಾಯನ ಆಘಾತ, ಹುಳು ಹುಪ್ಪಟೆ ನುಸಿಗಳ ಕಾಟದಿಂದ ಖಿಲವಾಗುವ ಅಪಾಯದಲ್ಲಿವೆ. ಇವನ್ನೆಲ್ಲ ನಮ್ಮ ಮುಂದಿನ ಪೀಳಿಗೆಗಳಿಗೆ ಕಾಪಾಡುವುದು, ನಮ್ಮೆಲ್ಲರ ಕರ್ತವ್ಯ. ಅಷ್ಟೇ ಅಲ್ಲ, ಅವುಗಳನ್ನು ಅಭ್ಯಸಿಸಲು ಆಸಕ್ತಿ ಇದ್ದವರಿಗೆಲ್ಲಾ ಅವು ಲಭ್ಯವಾಗುವಂತೆ ಮಾಡಬೇಕು.
ಬಯಲಿನಲ್ಲಿ ಬಂಡೆಗಳ ಮೇಲೋ, ಬೆಟ್ಟಗಳಮೇಲೋ, ಗುಹೆಗಳಲ್ಲೋ, ದೇಗುಲಗಳ ಬದಿಯಲ್ಲೋ ಕೆತ್ತಿರುವ ಬರಹಗಳು, ಗಾಳಿ, ಬಿಸಿಲು ಮಳೆಗಳಿಂದ ಅಪಾಯ ಎದುರಿಸುತ್ತವೆ. ಅವನ್ನು ರಕ್ಷಿಸುವುದು ಸರಕಾರ, ಪುರಾತತ್ವ ಇಲಾಖೆಗಳ ಜವಾಬ್ದಾರಿ. ಗ್ರಂಥಾಲಯಗಳಲ್ಲೂ, ಎಲ್ಲ ಧರ್ಮಗಳ ಮಠಗಳಲ್ಲೂ ತಾಳೆಗರಿಯ ಗ್ರಂಥಗಳು ವಿಪುಲವಾಗಿ ಸಿಗುತ್ತವೆ. ಇವನ್ನು ಕೆಡದಂತೆ ರಕ್ಷಿಸಿಡುವುದು ಬಹಳ ಕಷ್ಟದ ಕೆಲಸ. ಬಹುತೇಕ ಗ್ರಂಥಗಳ ಭೌತಿಕ ಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಗ್ರಂಥಗಳು, ಆರ್ದ್ರತೆಯನ್ನು ಕಳೆದುಕೊಂಡು, ಮುಟ್ಟಿದರೆ ಮುರಿದುಹೋಗುವ ಸ್ಥಿತಿಯಲ್ಲಿರುತ್ತವೆ. ಅವನ್ನು ಎಲ್ಲರ ಅಧ್ಯಯನಕ್ಕೂ ತೆರೆದಿಡುವುದು ಅಸಾಧ್ಯ ಮತ್ತು ಅವುಗಳ ಉಳಿವಿಗೇ ಅಪಾಯಕರ. ಇವುಗಳ ರಕ್ಷಣೆಯೂ ಸರಕಾರ ಮತ್ತು ಗ್ರಂಥಾಲಯ ಪಾಲಕರಿಗೆ ಸೇರಿದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಹಂಚಿ ಹೋಗಿರುವ ಈ ಪ್ರಾಚೀನ ಗ್ರಂಥಗಳನ್ನು ಅಭ್ಯಾಸಿಗಳಿಗೆ ಸುಲಭವಾಗಿ ದೊರಕುವಂತೆ ಮಾಡುವುದು ಸಾಧ್ಯವೆ?
ಇದೇ
ಪ್ರಶ್ನೆ,
ಕನ್ನಡಿಗ
ಪಿ.ಆರ್.
ಮುಕುಂದ್
ಅವರನ್ನು
ಕಾಡಿದ್ದು.
ಸಾಂಪ್ರದಾಯಿಕ
ಕುಟುಂಬದಲ್ಲಿ
ಜನಿಸಿದ
ಮುಕುಂದ್,
ಬೆಂಗಳೂರಿನವರು.
ಆರಂಕುಸವಿಟ್ಟರೂ
ಅವರ
ಮನ
ಬಸವನಗುಡಿಯನ್ನು
ನೆನೆಯುತ್ತದೆ.
ನ್ಯಾಷನಲ್
ಕಾಲೇಜಿನಲ್ಲಿ
ಪದವಿ
ಪಡೆದ
ನಂತರ,
ಟೆನ್ನೆಸೀ
ವಿಶ್ವವಿದ್ಯಾಲದಲ್ಲಿ
ಎಲೆಕ್ಟ್ರಿಕಲ್
ಎಂಜಿನಿಯರಿಂಗ್ನಲ್ಲಿ
ಡಾಕ್ಟರೇಟ್
ಪಡೆದವರು.
ಈಗ
ನ್ಯೂ
ಯಾರ್ಕ್
ರಾಜ್ಯದ
ರಾಚೆಸ್ಟರ್
ತಾಂತ್ರಿಕ
ವಿದ್ಯಾಲಯದಲ್ಲಿ
ಪ್ರಾಧ್ಯಾಪಕರಾಗಿದ್ದಾರೆ.
ಅನೇಕ
ವಿದ್ಯಾರ್ಥಿಗಳಿಗೆ
ಎಲೆಕ್ಟ್ರಿಕಲ್
ಎಂಜಿನಿಯರಿಂಗ್
ಕಲಿಸುವುದಲ್ಲದೆ,
ಆಸಕ್ತರಿಗೆ
ಹಿಂದೂ
ಧರ್ಮ,
ತತ್ತ್ವ
ಶಾಸ್ತ್ರಗಳ
ಬಗ್ಗೆ
ಉಪನ್ಯಾಸವನ್ನೂ
ಕೊಡುತ್ತಾರೆ.
ಶುಕ್ರವಾರ
ಮಧ್ಯಾಹ್ನದ
ಅವರ
ಧಾರ್ಮಿಕ
ಉಪನ್ಯಾಸಗಳಲ್ಲಿ,
ಭಾರತೀಯ
ವಿದ್ಯಾರ್ಥಿಗಳಲ್ಲದೆ
ಅನೇಕ
ಅಮೇರಿಕನ್
ವಿದ್ಯಾರ್ಥಿಗಳೂ
ಭಾಗವಹಿಸುತ್ತಾರೆ.
ಕಂಪ್ಯೂಟರ್
ಒಳಗಡೆ
ಅಳವಡಿಸುವ
ಮೈಕ್ರೋ
ಚಿಪ್ಗಳ
ವಿನ್ಯಾಸ
ಮುಕುಂದ್
ಮತ್ತು
ಅವರ
ಶಿಷ್ಯರ
ಮುಖ್ಯ
ಸಂಶೋಧನಾ
ವಿಷಯ.
ಕಿರಿಬೆರಳಿನ
ಉಗುರಿಗಿಂತಲೂ
ಚಿಕ್ಕ
ಸಿಲಿಕಾನ್
ವೇಫರ್
ಮೇಲೆ,
ಲಕ್ಷಗಟ್ಟಲೆ
ವಿದ್ಯುನ್ಮಾನ
ಬಿಡಿ
ಭಾಗಗಳನ್ನು
ತುರುಕುವ
ವಿಜ್ಞಾನದಲ್ಲಿ
ಅವರಿಗೆ
ವಿಶೇಷ
ಪರಿಣತಿ.
ನೂರಾರು ಪುಟಗಳನ್ನು ಒಂದೇ ಪ್ಲಾಸ್ಟಿಕ್ ಷೀಟ್ ಮೇಲೆ ಮುದ್ರಿಸುವ, ಮೈಕ್ರೋಫಿಷ್ ಮತ್ತು ಮೈಕ್ರೊಫಿಲ್ಮ್ ಎನ್ನುವ ತಂತ್ರಜ್ಞಾನ ಕೆಲವಾರು ದಶಕಗಳಿಂದ ಲಭ್ಯವಿದೆ. ಲೈಬ್ರರಿಗಳಲ್ಲಿ ನೀವು ಮೈಕ್ರೋಫಿಲ್ಮ್ ರೀಡರುಗಳನ್ನೂ ನೋಡಿರಬಹುದು. ಈ ಸಾಮ್ಯದಿಂದ ಮುಕುಂದ್ ಅವರು ತಮ್ಮ ಹೊಸ ತಂತ್ರಜ್ಞಾನಕ್ಕೆ "ವೇಫರ್ ಫಿಷ್" ಎಂದು ಹೆಸರಿಸಿದ್ದಾರೆ. ಆದರೆ, ಇದು ಅತ್ಯಾಧುನಿಕ ತಂತ್ರಜ್ಞಾನ. ಒಂದು ಮೈಕ್ರೊಫಿಷ್ನಲ್ಲಿ ಸುಮಾರು 64 ಪುಟಗಳನ್ನು ಅಳವಡಿಸಬಹುದು. ವೇಫರ್ಫಿಷ್ನಲ್ಲಿ ಸಾವಿರಗಟ್ಟಲೆ ಇಮೇಜ್ಗಳನ್ನು ಮುದ್ರಿಸಬಹುದು. ಮೈಕ್ರೋಫಿಷ್ ತೇವಾಂಶದಿಂದ ಹಾಳಾಗಬಹುದು, ಬೆಂಕಿಯಲ್ಲಿ ಸುಟ್ಟು ಹೋಗಬಹುದು. ಆದರೆ ವೇಫರ್ ಫಿಷ್ ಅವಿನಾಶಿ. ಸಾಮಾನ್ಯ ಉಪಯೋಗದಲ್ಲಿ ಐನೂರು ವರ್ಷ ಕಾಲ ಬಾಳಬಲ್ಲದು ಎನ್ನುತ್ತಾರೆ ಮುಕುಂದ್.
ಬೆಂಗಳೂರಿನಲ್ಲಿ ಸಾವಿರಾರು ಹೈಟೆಕ್ ಕಂಪನಿಗಳಿವೆ ಎಂಬುದು ಸರ್ವವಿದಿತ. ಅವುಗಳಲ್ಲಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕಂಪನಿಗಳೆಷ್ಟು? ನನಗಂತೂ ಗೊತ್ತಿಲ್ಲ. ಬೆರಳೆಣಿಕೆಯಷ್ಟೇ ಎಂದು ನನ್ನ ಅನುಮಾನ. ಅಮೇರಿಕದ ರಾಚೆಸ್ಟರ್ನಲ್ಲಿ ಅಂಥದೊಂದು ಕಂಪನಿ ಇದೆ ಎಂದರೆ ನಂಬುತ್ತೀರಾ? ಈ ಹೆಗ್ಗಳಿಕೆಗೆ ಪಾತ್ರವಾಗಿರುವುದು ನ್ಯಾನೋ ಆರ್ಕ್ ಕಂಪನಿ. ಸಧ್ಯಕ್ಕೆ, ಈ ಕಂಪನಿಯಲ್ಲಿ ಆರು ಉದ್ಯೋಗಿಗಳಿದ್ದಾರೆ. ಅದರಲ್ಲಿ ನಾಲ್ಕು ಕನ್ನಡಿಗರು. ನ್ಯಾನೋ ಆರ್ಕ್ ಸಂಸ್ಥೆಯು ಹೆರಿಟೇಜ್ ಸೀರೀಸ್ ಎಂಬ ಮಾಲೆಯೊಂದನ್ನು ಆರಂಭಿಸಿದೆ. ಈ ಮಾಲೆಯ ಮೊದಲ ಪುಷ್ಪ ಸರ್ವಮೂಲ ಗ್ರಂಥ. ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ, ಕ್ರಿ.ಶ. 1492ರಲ್ಲಿ ಮರದ ತೊಗಟೆಯಮೇಲೆ ಬರೆಯಲಾದ ಭಗವದ್ಗೀತೆಯ ಪ್ರತಿಯೊಂದಿದೆ. ಅದು ನೇವಾರಿ ಲಿಪಿಯಲ್ಲಿದೆ. ಆ ವಿಶ್ವವಿದ್ಯಾಲಯದ ಸಹಯೋಗದಿಂದ, ಈಗ ಭಗವದ್ಗೀತೆಯು ಹೆರಿಟೇಜ್ ಮಾಲೆಯ ಎರಡನೆಯ ಕುಸುಮವಾಗಿ ಹೊರಬಂದಿದೆ. ಒಂದಿಲ್ಲೊಂದು ದಿನ, ಪ್ರಾಚೀನ ಕನ್ನಡ ಗ್ರಂಥಗಳು ಕೂಡ ಹೆರಿಟೇಜ್ ಮಾಲೆಯಲ್ಲಿ ಬರುತ್ತವೆಂದು ಹಾರೈಸೋಣವೆ?