ಸಚಿವ ಮುಂಡೆ ದರ್ಶನ ಪಡೆದ ರಾಹುಲ್; ಚಾಲಕನ ಸೆರೆ
ನವದೆಹಲಿ, ಜೂನ್ 3: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಅಕಾಲಿಕ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಅನೇಕ ಮುಖಂಡರು ಮೃತರ ಅಂತಿಮ ದರ್ಶನಕ್ಕೆ ರಾಜಧಾನಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಸಾಲುಗಟ್ಟಿ ಬರುತ್ತಿದ್ದಾರೆ. ಇದೀಗತಾನೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಸಚಿವ ಮುಂಡೆ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ನಾಯಕರು, ಬಿಜೆಪಿ ನಾಯಕರಾದ ನಿತನ್ ಗಡ್ಕರಿ, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್, ಸಿದ್ದೇಶ್ವರ್, ಸ್ಮೃತಿ ಇರಾನಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಚಾಲಕ Imperial Hotel ಉದ್ಯೋಗಿ: ಬೆಳಗ್ಗೆ 6.30ರಲ್ಲಿ ಏನಾಗಿತ್ತೆಂದರೆ ಮುಂಬೈಗೆ ತೆರಳಲು ಸಚಿವ ಗೋಪಿನಾಥ್ ಮುಂಡೆ ಅವರು Maruti Suzuki SX4 (DL 8C BF 0034) ಕಾರಿನಲ್ಲಿ ಬೆಂಗಾವಲು ಪಡೆಯ ನೆರವಿಲ್ಲದೆ ಆಪ್ತ ಸಹಾಯಕ ಮತ್ತು ಕಾರಿನ ಚಾಲಕನ ಜತೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದರು. (ಗೋಪಿನಾಥ್ ಮುಂಡೆ ಸಾವು: ಇದೇನಿದು ಶೋಭಾಡೆ ಸಂಸ್ಕಾರ?)
ಇತ್ತ (ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ) ಸಚಿವ ಮುಂಡೆ ಅವರ ಆಪ್ತ ಸಹಾಯಕ ಮತ್ತು ಕಾರಿನ ಚಾಲಕನಿಗೆ ಲಘುವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತಕ್ಕೆ ಕಾರಣವಾದ (ಮುಂದೆ ಸಾವಿಗೂ ಕಾರಣನಾದ) ಆರೋಪದ ಮೇಲೆ ಗುರುವಿಂದರ್ ಸಿಂಗ್ ಅವರನ್ನು ಬಂಧಿಸಿ, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸ್ ಜಂಟಿ ಆಯುಕ್ತ ಎಂಕೆ ಮೀನಾ ತಿಳಿಸಿದ್ದಾರೆ. (ಅಪಘಾತ: ಸಚಿವ ಮುಂಡೆ ಸಾವು, ವೈದ್ಯರು ಏನನ್ತಾರೆ?)