ರೈತರಿಗೆ ತಂತ್ರಜ್ಞಾನದ ಕೊಡುಗೆ ನೀಡಬೇಕು : ಮೋದಿ
ನವದೆಹಲಿ, ಜು. 29 :ಕೃಷಿ ಉತ್ಪಾದನೆಯಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿ, ಅದು ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ
ನವದೆಹಲಿಯಲ್ಲಿ
ಭಾರತೀಯ
ಕೃಷಿ
ಸಂಶೋಧನಾ
ಮಂಡಳಿಯ
(ಐಸಿಎಆರ್)
86ನೇ
ಸಂಸ್ಥಾಪನಾ
ದಿನಾಚರಣೆ
ಕಾರ್ಯಕ್ರಮದಲ್ಲಿ
ಮಾತನಾಡಿದ
ಪ್ರಧಾನಿ
ನರೇಂದ್ರ
ಮೋದಿ,
ದೇಶದ
ರೈತರು
ಅಭಿವೃದ್ಧಿ
ಹೊಂದುತ್ತಿದ್ದಾರೆಯೆ?
ಎಂಬುದನ್ನು
ಖಾತರಿ
ಪಡಿಸುವುದು
ಬಹುಮುಖ್ಯ
ಎಂದರು.
ದೇಶದ ಪ್ರಗತಿಗಾಗಿ ರೈತರು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದ ಮೋದಿ, ದೇಶದಲ್ಲಿ ಕೃಷಿ ಉತ್ಪಾದನೆಯಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿ, ಅದು ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ರೈತರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದ ಮೋದಿ, ಕೃಷಿ ವಿಶ್ವ ವಿದ್ಯಾಲಯಗಳು ರೈತರ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ರೈತರು ಹೆಚ್ಚಾಗಿ ರೇಡಿಯೋ ಕೇಳುತ್ತಾರೆ. ಆದ್ದರಿಂದ ಕೃಷಿ ಸಂಬಂಧಿ ರೇಡಿಯೋ ಕೇಂದ್ರ ಆರಂಭಿಸುವ ಅಗತ್ಯವಿದೆ ಎಂದರು. [ಮೋದಿ ಸರ್ಕಾರಕ್ಕೆ ಟೈಂ ಬೇಕು]
Radio
can
be
used
as
a
medium
to
sort
out
issues
that
farmers
face,
students
from
agri
colleges
can
use
radio
to
help
farmers:
@narendramodi
—
Narendra
Modi
Fan
(@Narendramodi_G)
July
29,
2014
ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನಗಳಿಂದ ಕೃಷಿಗೆ ಲಾಭವಾಗಬೇಕು ಎಂದು ಹೇಳಿದ ಮೋದಿ, ಬೆಳೆ ಬೆಳೆಯುವ ಅವಧಿ ಕಡಿಮೆಯಾಗಬೇಕು, ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳೆ ಬೆಳೆಯಬೇಕು ಹೀಗಾದಲ್ಲಿ ರೈತರ ಪ್ರಗತಿ ಸಾಧ್ಯ ಎಂದು ಹೇಳಿದರು.
ನೀರು ದೇವರು ನೀಡಿದ ಪ್ರಸಾದ ನೀರನ್ನು ಕೃಷಿಗೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ ಮೋದಿ, ಒಂದು ಹನಿ ನೀರನ್ನು ರೈತರು ಹಾಳು ಮಾಡದೆ ಕೃಷಿಗೆ ಬಳಸಬೇಕಿದೆ ಎಂದರು.
ಪ್ರತಿಯೊಬ್ಬ ರೈತ ದೇಶಕ್ಕೆ ವರದಾನವಿದ್ದಂತೆ ಎಂದು ಹೇಳಿದ ಪ್ರಧಾನಿ ಮೋದಿ, ರೈತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದರು.