ಮೈಸೂರು : ಸೆಪ್ಟೆಂಬರ್ ನಿಂದ ಸ್ಪೈಸ್ ಜೆಟ್ ಹಾರಾಟವಿಲ್ಲ
ಮೈಸೂರು, ಜು. 30 : ದಸರಾ ಸಿದ್ಧತೆಯಲ್ಲಿ ತೊಡಗಿರುವ ಮೈಸೂರಿನ ಜನರಿಗೆ ಕಹಿ ಸುದ್ದಿ ಕಾದಿದೆ. ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ನೀಡುತ್ತಿರುವ ಸ್ಪೈಸ್ ಜೆಟ್ ಸೆ.1ರಿಂದ ತನ್ನ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಬೆಂಗಳೂರು-ಮೈಸೂರು
ನಡುವಿನ
ಸ್ಪೈಸ್
ಜೆಟ್
ಸೇವೆ
ಸ್ಥಗಿತಗೊಳಿಸುವ
ಬಗ್ಗೆ
ವಿಮಾನ
ನಿಲ್ದಾಣದ
ನಿರ್ದೇಶಕ
ಸಿ.ಮಂಜುನಾಥ್
ಅವರಿಗೆ
ಸಂದೇಶ
ರವಾನೆಯಾಗಿದೆ.
ಈ
ಬಗ್ಗೆ
ಅಧಿಕೃತ
ಆದೇಶ
ಮಾತ್ರ
ಅವರ
ಕೈ
ಸೇರಬೇಕಾಗಿದೆ.
ಸೆ.1ರಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಲು ಸ್ಪೈಸ್ ಜೆಟ್ ನಿರ್ಧರಿಸಿದೆ. ಸೆ.25ರಿಂದ ಅ.4ರ ತನಕ ಈ ಬಾರಿಯ ದಸರಾ ಉತ್ಸವ ನಡೆಯಲಿದೆ. ವಿಮಾನಯಾನ ಸೇವೆ ಸ್ಥಗಿತಗೊಂಡರೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆ ಉಂಟಾಗಲಿದೆ. [ಬೆಂ-ಮೈ ವಿಮಾನ ಸಂಚಾರ ಆರಂಭ]
2010ರಲ್ಲಿ ಮೈಸೂರಿನ ಮಂಡಕಹಳ್ಳಿಯಲ್ಲಿರುವ ವಿಮಾನ ನಿಲ್ದಾಣವನ್ನು 80 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಹಲವು ವರ್ಷಗಳ ಕಾಲ ಅಲ್ಲಿ ವಿಮಾನ ಹಾರಾಟವಿರಲಿಲ್ಲ. ನಂತರ ಕಿಂಗ್ ಫಿಷರ್ ವಿಮಾನಯಾನ ಸೇವೆ ಆರಂಭಿಸಿದರೂ ನಂತರ ಅದು ರದ್ದಾಗಿತ್ತು. [ಮೈಸೂರು ವಿಮಾನ ನಿಲ್ದಾಣದ ಕಥೆ]
2014ರ ಫೆಬ್ರವರಿಯಲ್ಲಿ ಬೆಂಗಳೂರು-ಮೈಸೂರು ನಡುವೆ ಸ್ಪೈಸ್ ಜೆಟ್ ವಿಮಾನಯಾನ ಸೇವೆ ಆರಂಭಿಸಿತ್ತು. ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲಿ ಬೆಂಗಳೂರು ಮೂಲಕ ಮೈಸೂರು ವಿಮಾನಗಳು ಸಂಚರಿಸುತ್ತಿದ್ದವು. ಸದ್ಯ ಅದು ಸಹ ಸ್ಥಗಿತಗೊಳ್ಳಲಿದೆ.
ವಿಮಾನ ನಿಲ್ದಾಣ ಅಭಿವೃದ್ಧಿ : ಮೈಸೂರು ವಿಮಾನ ನಿಲ್ದಾಣದ ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ, ಸುರಕ್ಷತೆ ಬಗ್ಗೆ ಅಪಸ್ವರ ಇದ್ದೇ ಇದೆ. ಎರಡನೇ ಹಂತದಲ್ಲಿ ಈ ರನ್ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಬೇಕು ಎಂಬ ಆಲೋಚನೆ ಸರ್ಕಾರದ ಮುಂದಿದೆ.