ಮೈಸೂರಲ್ಲಿ ಕನ್ನಡ ಪುಸ್ತಕ ಮೇಳ, ಮಂಡ್ಯದಲ್ಲಿ ಉರುಸ್
ಮೈಸೂರು, ಸೆ.23: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ದಸರಾ ಕನ್ನಡ ಪುಸ್ತಕ ಮೇಳ-2014ನ್ನು ಏರ್ಪಡಿಸಲಾಗಿದೆ.
ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3 ರವರೆಗೆ ಮೈಸೂರಿನ ಕಾಡಾ ಮೈದಾನದಲ್ಲಿ ದಸರಾ ಕನ್ನಡ ಪುಸ್ತಕ ಮೇಳ-2014 ನಡೆಯಲಿದೆ.ಅಕ್ಟೋಬರ್ 10ರವರೆಗೂ ಪುಸ್ತಕ ಮೇಳ ವಿಸ್ತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಈ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕನ್ನಡ ಪುಸ್ತಕ ಪ್ರಕಾಶಕರು ಅರ್ಜಿ ನಮೂನೆಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ ಎಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ ಎನ್ ಚಲವಾದಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 080-2248 4516/2210 7704. [ ಮೈಸೂರು ದಸರಾ ಚಿತ್ರಗಳು]
ಕೃತಿ ಪ್ರಕಟಿಸಲು ಪ್ರೋತ್ಸಾಹಧನ: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ 2013ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಸಾಹಿತ್ಯದ ಪ್ರಕಾರಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಯೋಮಿತಿ
18
ರಿಂದ
35
ವರ್ಷದೊಳಗಿರಬೇಕು.
ಎಸ್.ಎಸ್.ಎಲ್.ಸಿ.
ಅಥವಾ
ಅಧಿಕೃತ
ಜನ್ಮದಾಖಲಾತಿ
ಪ್ರಮಾಣ
ಪತ್ರದೊಂದಿಗೆ
ಇದೂವರೆಗೂ
ಎಲ್ಲಿಯೂ
ಚೊಚ್ಚಲ
ಕೃತಿ
ಪ್ರಕಟವಾಗದೇ
ಇರುವ
ಬಗ್ಗೆ
ಸ್ವಯಂ
ದೃಢೀಕರಣ
ಪತ್ರದೊಂದಿಗೆ
ಹಾಗೂ
ತಮ್ಮ
ಸ್ವವಿವರಗಳೊಂದಿಗೆ
ಅರ್ಜಿಗಳನ್ನು
ಸೆಪ್ಟೆಂಬರ್
30
ರೊಳಗೆ
ಕನ್ನಡ
ಪುಸ್ತಕ
ಪ್ರಾಧಿಕಾರ,
ಕನ್ನಡ
ಭವನ,
ಜೆ.ಸಿ.
ರಸ್ತೆ,
ಬೆಂಗಳೂರು-560002
ಇವರಿಗೆ
ಕಳುಹಿಸುವುದು.
ಹೆಚ್ಚಿನ ವಿವರಗಳಿಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, (ದೂ. 080-2248 4516/2201 7704) ಬೆಂಗಳೂರು ಇವರನ್ನು ಸಂಪರ್ಕಿಸಲು ಕೋರಿದೆ.
222ನೇ ಉರುಸ್ ಕಾರ್ಯಕ್ರಮ: ಮಂಡ್ಯ: ಹಜರತ್ ಟಿಪ್ಪು ಸುಲ್ತಾನ್ ಶಹೀದ್ (ರ) ರವರ 222ನೇ ಉರುಸ್-ಎ-ಷರೀಫ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 24 ರಂದು ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂನಲ್ಲಿರುವ ಗುಂಬದ್-ಎ-ಶಾಹಿಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಬದ್-ಎ-ಶಾಹಿಯಲ್ಲಿ ಆಧುನೀಕರಿಸಿದ ನೂತನ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ನೆರವೇರಿಸುವರು.
ಕರ್ನಾಟಕ ರಾಜ್ಯ ವಕ್ಫ್ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಪೌರಾಡಳಿತ ಇಲಾಖೆಯ ಸಚಿವರಾದ ಖಮರುಲ್ ಇಸ್ಲಾಮ್, ಹಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ಆರ್. ರೋಷನ್ ಬೇಗ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರುಗಳು ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದು ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ನ ಅಧ್ಯಕ್ಷರು ಹಾಗೂ ಶಾಸಕರಾದ ತನ್ವೀರ್ ಸೇಠ್ ಅವರು ತಿಳಿಸಿದ್ದಾರೆ.