ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ
ಮೈಸೂರು, ಸೆ. 25 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ 2014ರ ದಸರಾವನ್ನು ಉದ್ಘಾಟಿಸಿದರು. ಕಾರ್ನಾಡ್ ದಸರಾ ಉದ್ಘಾಟಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಗುರುವಾರ
ಚಾಮುಂಡಿ
ಬೆಟ್ಟಕ್ಕೆ
ಆಗಮಿಸಿದ
ಗಿರೀಶ್
ಕಾರ್ನಾಡ್,
ಸಿಎಂ
ಸಿದ್ದರಾಮಯ್ಯ
ಮುಂತಾದವರು
ಮೊದಲು
ತಾಯಿ
ಚಾಮುಂಡಿಗೆ
ವಿಶೇಷ
ಪೂಜೆ
ಸಲ್ಲಿಸಿದರು.
ನಂತರ
ದೇವಾಲಯದ
ಆವರಣದ
ವೇದಿಕೆಯಲ್ಲಿದ್ದ
ಬೆಳ್ಳಿರಥದಲ್ಲಿದ್ದ
ಚಾಮುಂಡಿ
ದೇವಿಯ
ವಿಗ್ರಹಕ್ಕೆ
ಪುಷ್ಪಾರ್ಚನೆ
ಮಾಡುವ
ಮೂಲಕ
2014ರ
ದಸರಾ
ಮಹೋತ್ಸವಕ್ಕೆ
ಚಾಲನೆ
ನೀಡಿದರು.
[ಮೈಸೂರು
ದಸರಾ
ಚಿತ್ರಗಳನ್ನು
ನೋಡಿ]
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಸಚಿವೆ ಉಮಾಶ್ರೀ, ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹತ್ತು ದಿನಗಳ ದಸರಾ ಮಹೋತ್ಸವಕ್ಕೆ ಈ ಮೂಲಕ ಚಾಲನೆ ನೀಡಲಾಗಿದ್ದು, ದಸರಾದ ಹಲವು ಕಾರ್ಯಕಮಗಳು ಇಂದು ಸಂಜೆಯ ತನಕ ಮೈಸೂರಿನಲ್ಲಿ ಉದ್ಘಾಟನೆಗೊಳ್ಳಲಿವೆ.
ಪ್ರತಿಭಟನಾಕಾರರ ಬಂಧನ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ದಸರಾವನ್ನು ಉದ್ಘಾಟನೆ ಮಾಡಬಾರದು ಎಂದು ವೇದಿಕೆಯ ಬಳಿ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. [ದಸರಾ ಉದ್ಘಾಟನೆ: ಕಾರ್ನಾಡ್ ಬೇಡ, ಭೈರಪ್ಪ ಇರಲಿ]
ಸಿದ್ದರಾಮಯ್ಯ ಮಾತು : ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಗಿರೀಶ್ ಕಾರ್ನಾಡ್ ಆಸ್ತಿಕರೋ? ನಾಸ್ತಿಕರೋ ಎಂಬ ವಾದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುವುದು ಬೇಡ, ರಾಜ್ಯದ ಎಲ್ಲಾ ಜಿಲ್ಲೆಗಳ ಜನರು ಮೈಸೂರಿಗೆ ಬಂದು ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. [ದಸರಾ ಮಾಹಿತಿ ಇಲ್ಲಿದೆ ನೋಡಿ]
I
thank
Shri.
Girish
Karnad
for
gracing
the
occasion
at
the
Inauguration
of
Mysuru
Dasara
2014
—
Chief
Minister
(@CMofKarnataka)
September
25,
2014
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆ. ಆದರೆ, ನಾಡಹಬ್ಬ ಆಚರಣೆಯನ್ನು ನಿಲ್ಲಿಸಲಾಗುವುದಿಲ್ಲ ಆದ್ದರಿಂದ ಆಚರಣೆ ಮಾಡಲಾಗುತ್ತಿದೆ ಎಂದರು. ರಾಜ್ಯದ ಎಲ್ಲಾ ಜನರಿಗೂ ಅವರು ದಸರಾ ಶುಭಾಶಯ ಕೋರಿದರು.
ಸರ್ವರಿಗು
ದಸರಾ
ಹಬ್ಬದ
ಶುಭಾಶಯಗಳು!
—
Chief
Minister
(@CMofKarnataka)
September
25,
2014