ಮೈಸೂರು ಜಿಲ್ಲಾ ಪಂಚಾಯಿತಿ ಕೈವಶ
ಬೆಂಗಳೂರು, ಜು. 17 : ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ನ ಪುಷ್ಪಾವತಿ ಅಮರನಾಥ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಸ್ವತಂತ್ರ್ಯ ಸದಸ್ಯ ಎಲ್.ಮಾದಪ್ಪ ಉಪಾಧ್ಯಕ್ಷರಾಗಿ ಬುಧವಾರ ಆಯ್ಕೆಯಾದರು.
ಬುಧವಾರ
ನಡೆದ
ಮೈಸೂರು
ಜಿಲ್ಲಾ
ಪಂಚಾಯತಿ
ಚುನಾವಣೆಯಲ್ಲಿ
ಪುಷ್ಪಾವತಿ
ಅವರು
28
ಮತಗಳನ್ನು
ಪಡೆದು
ಬಿಜೆಪಿ
ಅಭ್ಯರ್ಥಿ
ಎಚ್.ಆರ್.ಭಾಗ್ಯಲಕ್ಷ್ಮೀ
ವಿರುದ್ಧ
ಜಯಗಳಿಸಿದರು.
ಈ
ಮೂಲಕ
ಮುಖ್ಯಮಂತ್ರಿ
ಸಿದ್ದರಾಮಯ್ಯ
ತವರು
ಜಿಲ್ಲೆಯಲ್ಲಿ
ಕಾಂಗ್ರೆಸ್
ಅಧಿಕಾರದ
ಚುಕ್ಕಾಣಿ
ಹಿಡಿಯಿತು.
ಹೊಸದಾಗಿ
ಆಯ್ಕೆಯಾದ
ಅಧ್ಯಕ್ಷ-ಉಪಾಧ್ಯಕ್ಷರ
ಅವಧಿ
ಒಂದು
ವರ್ಷ
ಮತ್ತು
ಏಳು
ತಿಂಗಳು
ಇದೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮತ್ತು ಉಪಾಧ್ಯಕ್ಷರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿತ್ತು. 46 ಸದಸ್ಯರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 21, ಜೆಡಿಎಸ್ 16 ಮತ್ತು ಬಿಜೆಪಿ 8 ಸದಸ್ಯರ ಬಲ ಹೊಂದಿವೆ. ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾದಪ್ಪ ಅವರು ಸ್ವತಂತ್ರ ಸದಸ್ಯರಾಗಿದ್ದರು, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. [ಬೆಂ-ಮೈಸೂರು ಜೋಡಿ ಮಾರ್ಗ ಮಾರ್ಚಿಗೆ ಪೂರ್ಣ]
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಮಾದಪ್ಪ ಅವರಿಗೆ 2 ಮತಗಳ ಕೊರತೆ ಇತ್ತು. ಜೆಡಿಎಸ್ ಪಕ್ಷದ ಆರು ಸದಸ್ಯರು ಮಾದಪ್ಪ ಅವರಿಗೆ ಬೆಂಬಲ ನೀಡಿದ್ದರಿಂದ ಅವರು ಉಪಾಧ್ಯಕ್ಷಗಾದಿಗೇರಿದ್ದಾರೆ. ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅವರು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವನ್ನು ಅನುಮೋದಿಸಿದ್ದಾರೆ.