ಮಣಿಪಾಲ, ಆ, 21 : ನಗರದ ಮಾಧವ ಪೈ ಕಾಲೇಜು ಆವರಣಕ್ಕೆ ವಿಶೇಷ ಅತಿಥಿಯೊಬ್ಬ ಇತ್ತೀಚೆಗೆ ಭೇಟಿ ನೀಡಿದ್ದ. ಅರಣ್ಯ ನಾಶದ ಪ್ರತೀಕ ಎಂಬಂತೆ ಕಾಡಿನಲ್ಲಿರಬೇಕಾದ ಹೆಬ್ಬಾವು ಕಾಲೇಜಿಗೆ ಆಗಮಿಸಿತ್ತು.
ನಂತರ ಉರಗ ತಜ್ಞ ಗುರುರಾಜ್ ಸಾಣಿಲ್ ಅವರನ್ನು ಕರೆಸಿ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಆಗುಂಬೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಕಾಲೇಜಿನ ಹಿಂಭಾಗದಲ್ಲಿ ಮಲಗಿದ್ದ ಹೆಬ್ಬಾವು ಕಂಡ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ಸ್ಥಳಕ್ಕೆ ಆಗಮಿಸಿದ ಗುರುರಾಜ್ ಹಾವು ಹಿಡಿದು 'ಹೆಬ್ಬಾವುಗಳು ಮಾನವರನ್ನು ತಿನ್ನುವುದಿಲ್ಲ, 14 ಅಡಿ ಉದ್ದದ ಈ ಹಾವು ಸುಮಾರು 20 ವರ್ಷ ಪ್ರಾಯದ್ದಿರಬೇಕು' ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಭಯ ದೂರಮಾಡಿದ ಗುರುರಾಜ್ ಅವರಿಗೆ ಹಾವಿನ ವಿವಿಧ ಭಾಗಗಳ ಪರಿಚಯ ಮಾಡಿಕೊಟ್ಟರು. ಸ್ವತಃ ವಿದ್ಯಾರ್ಥಿಗಳೇ ಹಾವಿನ ತಲೆ, ಬಾಲ ಹಿಡಿದು ಸಂಭ್ರಮಿಸಿದರು. ನಂತರ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
Please read our comments policy before posting