ಕನ್ನಡೇತರ ರೈಲ್ವೆ ನೌಕರರಿಗೆ ಕನ್ನಡ ಕಲಿಕಾ ಶಿಬಿರ
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಒಂದು ತಿಂಗಳ ಕಾಲ ಈ ತರಬೇತಿ ಶಿಬಿರವನ್ನು ಆಯೋಜಿಸಿದೆ.
ವಿವಿಧ ರಾಜ್ಯಗಳಿಗೆ ಸೇರಿದ ಸುಮಾರು 100ಕ್ಕೂ ಅಧಿಕ ಸಿಬ್ಬಂದಿಗಳು ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಕನ್ನಡ ಮಾತನಾಡುವ ತರಗತಿಯನ್ನು ಹೇಳಿಕೊಡಲಾಗುತ್ತಿದ್ದು ನಂತರ ಬರವಣಿಗೆ ತರಬೇತಿ ನಡೆಯಲಿದೆ.
ತರಬೇತಿ ಯಾಕೆ? ರಾಜ್ಯದ ರೈಲು ನಿಲ್ದಾಣಗಳಲ್ಲಿ ಅನ್ಯಭಾಷೆಯ ರೈಲ್ವೆ ನೌಕರರಿಂದ ಸಂವಹನದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಇಲಾಖೆ ಗಮನ ಸೆಳೆಯುತ್ತಿದ್ದವು. ಆದರೆ ಈ ಪ್ರತಿಭಟನೆಗಳಿಗೆ ರೈಲ್ವೆ ಇಲಾಖೆಯಿಂದ ಸೂಕ್ತ ಪ್ರತಿಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ಕನ್ನಡದವರೇ ಆದ ಡಿವಿ ಸದಾನಂದಗೌಡ ಅವರು ರೈಲ್ವೆ ಸಚಿವರಾಗಿ ನೇಮಕವಾದ ಮೇಲೆ ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ.
Comments
kannada indian railways karnataka sadananda gowda district news ಮಂಗಳೂರು ಕನ್ನಡ ಭಾರತೀಯ ರೈಲ್ವೆ ಕರ್ನಾಟಕ ಸದಾನಂದ ಗೌಡ
English summary
Reports inform that, Palakkad Division of Southern Railway has started a 30 days class for the frontline Railway staff in Mangalore Central station on August 1
Story first published: Thursday, August 7, 2014, 16:56 [IST]