ಪೂಜಾರಿ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯ
ಮಂಗಳೂರು, ಮೇ 28 : ಬಜರಂದಳದ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
ನಗರದ ಪುರಭವನದಿಂದ ಆರಂಭವಾದ ಪ್ರತಿಭಟನಾ ಮೆರಮಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪದಲ್ಲಿ ಹುಸೇನ್, ಇಮ್ರಾನ್ ಮತ್ತು ಇರ್ಷಾದ್ ಎಂಬ ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ಉಪ್ಪಿನಕಾಯಿ ಮಾರಾಟ, ಕತ್ತರಿ ಸಾಣೆ ಹಾಕುವುದು ಹಾಗೂ ಮನೆಗಳಿಗೆ ದಿನನಿತ್ಯದ ವಸ್ತುಗಳ ಮಾರಾಟ ಮಾಡಿ ಹುಸೇನ್ ತನ್ನ ಕುಟುಂಬಕ್ಕೆ ನೆರವು ನೀಡುತಿದ್ದ. ಇಮ್ರಾನ್ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾತ. ಇಂಥವರನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಿ ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ ಎಂದು ದೂರಿದರು.
ಪ್ರಕರಣಕ್ಕೆ
ಸಂಬಂಧಿಸಿದಂತೆ
ಬಂಧಿಸಲಾಗಿರುವ
ಅಮಾಯಕರನ್ನು
ತಕ್ಷಣ
ಬಿಡುಗಡೆ
ಮಾಡಬೇಕು
ಮತ್ತು
ನೈಜ
ಆರೋಪಿಗಳನ್ನು
ಬಂಧಿಸಿ
ಪ್ರಕರಣದ
ಮರು
ತನಿಖೆ
ನಡೆಸಬೇಕು.
ಈಗ
ಬಂಧಿಸಿರುವವರು
ನಿಜವಾದ
ಕೊಲೆಗಾರರು
ಎಂಬುದಕ್ಕೆ
ಸೂಕ್ತ
ಸಾಕ್ಷಿಗಳನ್ನು
ಪೊಲೀಸರು
ನೀಡಬೇಕು
ಎಂದು
ಮುನೀರ್
ಕಾಟಿಪಳ್ಳ
ಒತ್ತಾಯಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಪೋರೇಟರ್ ದಯಾನಂದ ಶೆಟ್ಟಿ, ಕೋಶಾಧಿಕಾರಿ ಜೀವನ್ರಾಜ್ ಕುತ್ತಾರ್, ಉಳಾಯಿಬೆಟ್ಟು ಗ್ರಾ.ಪಂ.ನ ಜಬ್ಬಾರ್ ಮಲ್ಲೂರು, ಎಸ್ಎಫ್ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.