ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಆಗಲಿದೆಯೇ?
ಮಂಗಳೂರು, ಜು.24 : ಶೀಘ್ರದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಮಂಗಳೂರು ಎಂದು ಬದಲಾವಣೆಯಾಗಲಿದೆಯೇ? ಸರ್ಕಾರದ ಮಾಹಿತಿ ಪ್ರಕಾರ ಹೌದು. ದಕ್ಷಿಣ ಕನ್ನಡ ಸೇರಿದಂತೆ ಹನ್ನೆರಡು ಜಿಲ್ಲೆಗಳ ಹೆಸರನ್ನು ಬದಲಾವಣೆ ಮಾಡುವ ಪ್ರಸ್ತಾವನೆ ಪ್ರಗತಿಯಲ್ಲಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿಧಾನಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಶ್ನೋತ್ತರ
ಅವಧಿಯಲ್ಲಿ
ವಿಧಾನ
ಪರಿಷತ್
ಸದಸ್ಯ
ಐವಾನ್
ಡಿಸೋಜಾ
ಕೇಳಿದ
ಪ್ರಶ್ನೆಗೆ
ಉತ್ತರ
ನೀಡಿದ
ಕಂದಾಯ
ಸಚಿವರು,
ಬೆಂಗಳೂರು,
ದಕ್ಷಿಣ
ಕನ್ನಡ,
ಬಳ್ಳಾರಿ,
ಬಿಜಾಪುರ,
ಬೆಳಗಾಂ,
ಚಿಕ್ಕಮಗಳೂರು
ಗುಲ್ಬರ್ಗಾ,
ಮೈಸೂರು,
ಶಿವಮೊಗ್ಗ,
ತುಮಕೂರು
ಜಿಲ್ಲೆಗಳ
ಹೆಸರನ್ನು
ಬದಲಾವಣೆ
ಮಾಡುವ
ಪ್ರಸ್ತಾವನೆ
ಸರ್ಕಾರದ
ಮುಂದಿದೆ
ಎಂದು
ಹೇಳಿದ್ದಾರೆ.
ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿಯೇ ದಕ್ಷಿಣ ಕನ್ನಡ ಸೇರಿದಂತೆ 12 ಜಿಲ್ಲೆಗಳ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದರಂತೆ ಬದಲಾವಣೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. [ವಿಧಾನಪರಿಷತ್ ಕಲಾಪಕ್ಕೆ ಬಂದ ಜಯಲಲಿತಾ!]
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾದ್ಯಾಪಕ ಡಾ.ಎಂ. ಚಿದಾನಂದ ಮೂರ್ತಿ ಹಾಗೂ ಬೆಂಗಳೂರಿನ ಕನ್ನಡ ಗೆಳೆಯರ ಬಳಗ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹೆಸರನ್ನು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದೆ ಎಂದು ಸಚಿವರು ತಿಳಿಸಿದರು.