ಮಂಗಳೂರು ಬಂದರಿನಲ್ಲಿ 32 ಟನ್ ರಕ್ತಚಂದನ ವಶ
ಮಂಗಳೂರು, ಆ.20 : ಬೆಂಗಳೂರಿನಿಂದ ಮಂಗಳೂರಿನ ಬಂದರಿಗೆ ಆಗಮಿಸಿದ್ದ ಕಂಟೈನರ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 32 ಟನ್ ರಕ್ತ ಚಂದನವನ್ನು ಬುಧವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ. ಶ್ರೀಲಂಕಾಕ್ಕೆ ಇದನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ
ಮಂಗಳೂರು
ಬಂದರಿನ
ಕಂದಾಯ,
ಪೊಲೀಸ್
ಮತ್ತು
ಗುಪ್ತಚರ
ಇಲಾಖೆ
ಅಧಿಕಾರಿಗಳು
ನಡೆಸಿದ
ಜಂಟಿ
ಕಾರ್ಯಾಚರಣೆಯಲ್ಲಿ.
ಶ್ರೀಲಂಕಾಕ್ಕೆ
ಸಾಗಿಗಸಲಾಗುತ್ತಿದ್ದ
32
ಟನ್
ರಕ್ತಚಂದನವನ್ನು
ವಶಪಡಿಸಿಕೊಂಡಿದ್ದಾರೆ.
ಖಚಿತ
ಮಾಹಿತಿ
ಮೇರೆಗೆ
ದಾಳಿ
ನಡೆಸಿದಾಗ
ಇದು
ಪತ್ತೆಯಾಗಿದೆ.
ಬೆಂಗಳೂರಿನಿಂದ ಈ ಕಂಟೈನರ್ ಆಗಮಿಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಾಬೂನು ಸಾಗಾಟದ ಪರವಾನಿಗೆ ಪಡೆದು ರಕ್ತ ಚಂದನ ಸಾಗಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Comments
English summary
32 tonnes of red Sandalwood seized in New Mangaore Port on Wednesday, August 20. According police container form Bangalore was sent to Sri Lanka.
Story first published: Wednesday, August 20, 2014, 14:23 [IST]