ಶಾಂತಿಯುತವಾಗಿ ಜನರಿಂದ ಹಕ್ಕು ಚಲಾವಣೆ
ಬೆಂಗಳೂರು, ಏ. 17 : ಲೋಕಸಭೆ ಚುನಾವಣೆಯ ಮತದಾನ ಕರ್ನಾಟಕದಲ್ಲಿ ಬಿರುಸಿನಿಂದ ನಡೆಯುತ್ತಿದ್ದರೂ ಶಾಂತಿಯುತವಾಗಿದೆ. ಅಲ್ಲಲ್ಲಿ ಕಾರ್ಯಕರ್ತರ ನಡುವೆ ಘರ್ಷಣೆಯಂತಹ ಪ್ರಕರಣ ವರದಿಯಾಗಿದ್ದು, ಬಿಟ್ಟರೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೆಳಗ್ಗೆ
ಏಳು
ಗಂಟೆಗೆ
ಮತದಾನ
ಆರಂಭವಾಗಿದ್ದು,
ಸಂಜೆ
6
ಗಂಟೆಯ
ತನಕ
ಮತದಾನ
ಮಾಡಲು
ಅವಕಾಶವಿದೆ.
ಸಮಯ
ಮುಗಿದ
ಮೇಲೆ
ಮತಗಟ್ಟೆ
ಮುಂದೆ
ಜನರು
ಮತದಾನ
ಮಾಡಲು
ಕಾಯುತ್ತಿದ್ದರೆ,
ಅವರಿಗೆ
ಹೆಚ್ಚುವರಿ
ಸಮಯಾವಕಾಶ
ನೀಡಲು
ಚುನಾವಣಾ
ಆಯೋಗ
ನಿರ್ಧರಿಸಿದೆ.
[ಮತದಾನದ
ಚಿತ್ರಗಳನ್ನು
ನೋಡಿ]
*
ನೆಲಮಂಗಲದ
ಮಂಡಿಗೆರೆಯಲ್ಲಿ
ಮತದಾರನೊಬ್ಬ
ಕುಡಿದ
ಮತ್ತಿನಲ್ಲಿ
ಮತಯಂತ್ರ
ಧ್ವಂಸಗೊಳಿಸಿದ
ಪರಿಣಾಮ
ಮತದಾನ
ಸ್ಥಗಿತಗೊಂಡಿತ್ತು.
*
ರಾಮನಗರದ
ಬಿಡದಿ
ಬಳಿಯ
ಕಂಚುಗಾರನಹಳ್ಳಿಯಲ್ಲಿ
ಜೆಡಿಎಸ್
ಕಾರ್ಯಕರ್ತೆ
ಜಾನಕಿ
ಮೇಲೆ
ಕಾಂಗ್ರೆಸ್
ಕಾರ್ಯಕರ್ತರಿಂದ
ಹಲ್ಲೆ
ನಡೆಸಿದ
ಘಟನೆ
ನಡೆದಿದೆ.
*
ಕೆಜಿಎಫ್
ನಲ್ಲಿ
ಬಿಜೆಪಿ
ಕಾರ್ಯಕರ್ತ
ಪಾಂಡ್ಯನ್
ಮೇಲೆ
ಜೆಡಿಎಸ್
ಕಾರ್ಯಕರ್ತರು
ಮಾರಣಾಂತಿಕ
ಹಲ್ಲೆ
ನಡೆಸಿದ್ದು,
ಪಾಂಡ್ಯನ್
ಅವರನ್ನು
ಆಸ್ಪತ್ರೆಗೆ
ದಾಖಲಿಸಲಾಗಿದೆ.
*
ಕೋಲಾರದ
ಮಾಸ್ತಿಯಲ್ಲಿ
ಹಣ
ಹಂಚುತ್ತಿದ್ದ
ಜೆಡಿಎಸ್
ಕಾರ್ಯಕರ್ತರನ್ನು
ಪೊಲೀಸರು
ತಡೆದರು.
*
ಹಣ
ಹಂಚುವ
ವಿಚಾರದಲ್ಲಿ
ಬಿಜೆಪಿ,
ಕಾಂಗ್ರೆಸ್,
ಜೆಡಿಎಸ್
ಕಾರ್ಯಕರ್ತರ
ನಡುವೆ
ಗಲಾಟೆ
ನಡೆದ
ಪ್ರಕರಣ
ದೊಡ್ಡಬಳ್ಳಾಪುರದ
ಆಡುವಳ್ಳಿ
ಗ್ರಾಮಪಂಚಾಯತಿ
ವ್ಯಾಪ್ತಿಯ
ಗೊಳ್ಳವಳ್ಳಿ
ಮತಗಟ್ಟೆ
ನಡೆದಿದೆ.
*
ಬೆಳಗಾವಿಯ
ಗೋಕಾಕ್
ತಾಲೂಕಿನ
ಮೆಳವತ್ತಿಯಲ್ಲಿ
ಬಿಜೆಪಿ
ಕಾರ್ಯಕರ್ತನ
ಮೇಲೆ
ಕಾಂಗ್ರೆಸ್ಸಿನವರು
ಮಾರಣಾಂತಿಕ
ಹಲ್ಲೆ
ನಡೆಸಿದ್ದಾರೆ.
*
ಚಾಮರಾಜನಗರದಲ್ಲಿ
ಜೆಡಿಎಸ್
ಅಭ್ಯರ್ಥಿ
ಕೋಟೆ
ಶಿವಣ್ಣ
ನಾಪತ್ತೆಯಾಗಿದ್ದಾರೆ.
[ಕೋಟೆ
ಶಿವಣ್ಣ
ಎಲ್ಲಿ?]