ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನಲ್ಲಿ ಸಿಕ್ಕಿದ ವಿಟ್ಲ ರೇಪಿಸ್ಟ್ ಗಳು ಜೈಲಿಗೆ

By * ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಪುತ್ತೂರು, ಮೇ.22: ವಿಟ್ಲದಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜೂ.3 ರ ತನಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇಬ್ಬರು ಆರೋಪಿಗಳನ್ನು ಗುಜರಾತ್‌ನಲ್ಲಿ ಬಂಧಿಸಲಾಗಿತ್ತು, ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ವಿನಂತಿಸಲಾಗಿತ್ತು. ಆದರೆ, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಸ್ಥಳೀಯ ನ್ಯಾಯಾಲಯ ನಿರ್ದೇಶಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ.ಶರಣಪ್ಪ ಹೇಳಿದ್ದಾರೆ.

ಆರೋಪಿಗಳಾದ ಬೊಬ್ಬಕೇರಿ ಬಶೀರ್ (29) ಹಾಗೂ ರಾದುಕಟ್ಟೆ ಬಶೀರ್ ಯಾನೆ ಕಡಂಬು ಬಶೀರ್ ಯಾನೆ ಅಬ್ದುಲ್ ಬಶೀರ್ (23) ಎಂಬವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಜಬ್ಬಾರ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Urimajalu Minor girl Gang Rape: Two accused brought to the city, another still at large

ಆರೋಪಿಗಳು ಏ.24ರಂದು ಅಪ್ರಾಪ್ತ ಬಾಲಕಿಯನ್ನು ಮಡಿಕೇರಿಗೆ ಬಲತ್ಕಾರವಾಗಿ ಕರೆದೊಯ್ದು ಅಲ್ಲಿ ಸರಣಿ ಅತ್ಯಾಚಾರ ನಡೆಸಿದ್ದರು. ಈ ಬಗ್ಗೆ ಬಾಲಕಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ಆರೋಪಿಗಳು ಬಂಧನ ಭೀತಿಯಿಂದ ನಾನಾ ಕಡೆಗೆ ಪಲಾಯನ ಮಾಡಿ ಬಳಿಕ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದರು.

ಗುಜರಾತ್‌ನ ಜಾಮ್‌ನಗರ ಮತ್ತು ದ್ವಾರಕಾ ಜಿಲ್ಲೆಗಳಲ್ಲಿ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಳಿಕ ಗುಜರಾತ್ ಪೊಲೀಸರಿಗೆ ಎಲ್ಲ ದಾಖಲೆಗಳನ್ನು ನೀಡಿ ಅಲ್ಲಿ ಕಾರ್ಯಾಚರಣೆ ನಡೆಸಲು ಸೂಚಿಸಲಾಯಿತು. ಅದರಂತೆ ಗುಜರಾತ್‌ನ ಓಖಾಮೆರಿನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ ಎಂದು ಡಾ.ಶರಣಪ್ಪ ಮಾಹಿತಿ ನೀಡಿದರು.

ಆರೋಪಿಗಳ ಬಂಧನ ಬಳಿಕ ಇಲ್ಲಿನ ಒಬ್ಬರು ಎಸ್‌ಐ ಹಾಗೂ ಇತರ ಸಿಬ್ಬಂದಿಗಳನ್ನು ವಿಮಾನದಲ್ಲಿ ಅಲ್ಲಿಗೆ ಕಳುಹಿಸಿ ಬಂಧಿತರು ಅತ್ಯಾಚಾರ ಆರೋಪಿಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಬಳಿಕ ಅವರನ್ನು ಮಂಗಳವಾರ ಮಂಗಳೂರಿಗೆ ಕರೆತರಲಾಯಿತು ಎಂದು ಅವರು ತಿಳಿಸಿದರು.

ಆರೋಪಿ ಬಿ.ಬಶೀರ್ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ರಾದುಕಟ್ಟೆ ಬಶೀರ್ ಎಂಬಾತ ಹಳೆಯ‌ ಆರೋಪಿಯಾಗಿದ್ದಾನೆ. ಪುತ್ತೂರು ಗ್ರಾಮಾಂತರ, ಸುಳ್ಯ, ಉಳ್ಳಾಲ, ಕಡಬ, ಉಪ್ಪಳ ಠಾಣೆ ಸರಹದ್ದಿನಲ್ಲಿ ಸಿಲಿಂಡರ್, ಬೈಕ್ ಕಳವು ಸೇರಿದಂತೆ ನಾನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಎಸ್‌ಪಿ ತಿಳಿಸಿದರು.

ಬಂಟ್ವಾಳ ಡಿವೈಎಸ್‌ಪಿ ರಶ್ಮಿ ಪರಡ್ಡಿ ಉಸ್ತುವಾರಿಯಲ್ಲಿ, ಬಂಟ್ವಾಳ ಇನ್‌ಸ್ಪೆಕ್ಟರ್ ಮಂಜಯ್ಯ ನೇತೃತ್ವದಲ್ಲಿ ವಿಟ್ಲ ಎಸ್‌ಐ ರಾಘವೇಂದ್ರ, ಡಿಸಿಐಬಿ ತಂಡದ ಸಂಜೀವ, ತಾರಾನಾಥ, ಉದಯ ರೈ, ಬೆಳ್ತಂಗಡಿ ಠಾಣೆಯ ಪ್ರವೀಣ, ಸುಂದರ ರಾಜ್, ಚಾಮಯ್ಯ ಹಾಗೂ ಜನಾರ್ದನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಡಾ.ಶರಣಪ್ಪ ತಿಳಿಸಿದರು.

English summary
Bakuta Bashir (29) and Radhukatte Bashir alias Kadambu Bashir alias Abdul Bashir (23) the accused in rape of minor Muslim girl of Kolpe, Idkidu Urimajalu were brought from Gujarat recently. Another accused Jabbar is still at large.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X