ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?
ಬೆಂಗಳೂರು, ಜು. 10 : ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎನ್ ಡಿಎ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಬಿಜೆಪಿ ಸರ್ಕಾರ ಮಂಡಿಸಿದ ಆಯವ್ಯಯದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂಬ ಮಾಹಿತಿ ಇಲ್ಲಿದೆ.
ಬಜೆಟ್
ಭಾಷಣದಲ್ಲಿ
ಹಣಕಾಸು
ಸಚಿವ
ಅರುಣ್
ಜೇಟ್ಲಿ,
ಬಡತನದಿಂದ
ಜನರು
ಬೇಸತ್ತು
ಹೋಗಿದ್ದಾರೆ.
ಹಣದುಬ್ಬರ
ತಡೆಯುವುದು
ನಮ್ಮ
ಮೊದಲ
ಆದ್ಯತೆಯಾಗಿದೆ.
ಭಾರತದ
ಅರ್ಥ
ವ್ಯವಸ್ಥೆ
ಎದುರು
ದೊಡ್ಡ
ಸವಾಲಿದೆ.
ಜಾಗತಿಕ
ವಿದ್ಯಮಾನಗಳು
ಮತ್ತು
ಮುಂಗಾರು
ಮಳೆ
ಕೊರತೆ
ನಮಗೆ
ತೊಂದರೆ
ಉಂಟು
ಮಾಡಿವೆ
ಎಂದರು.
[ಬಜೆಟ್
ಮುಖ್ಯಾಂಶಗಳು
ಇಲ್ಲಿವೆ]
ಬಜೆಟ್
ನಲ್ಲಿ
ಕರ್ನಾಟಕಕ್ಕೆ
ಸಿಕ್ಕಿದ್ದೇನು?
*
ಚೆನ್ನೈ-ಬೆಂಗಳೂರು
ಕಾರಿಡಾರ್
ತುಮಕೂರಿನವರೆಗೂ
ವಿಸ್ತರಣೆ
*
ತುಮಕೂರಲ್ಲಿ
ಕೈಗಾರಿಕಾ
ಸ್ಮಾರ್ಟ್
ಸಿಟಿ
ನಿರ್ಮಾಣ
*
ಬೆಂಗಳೂರು-ಮುಂಬೈ
ಆರ್ಥಿಕ
ಕಾರಿಡಾರ್
[ರೈಲ್ವೆ
ಬಜೆಟ್
2014
:
ಕರ್ನಾಟಕಕ್ಕೆ
ಸಿಕ್ಕಿದ್ದೇನು?]
*
ಮೈಸೂರಿನಲ್ಲಿ
ಟೆಕ್ಸ್ಟೈಲ್
ಕ್ಲಸ್ಟರ್
ನಿರ್ಮಾಣಕ್ಕೆ
200
ಕೋಟಿ
ರೂ.
*
ಎಲ್ಲ
ರಾಜ್ಯಗಳಲ್ಲಿ
ರೈತ
ಮಾರುಕಟ್ಟೆಯ
ಉನ್ನತೀಕರಣಕ್ಕೆ
ಒತ್ತು
*
ರಾಜ್ಯಗಳ
ಪೊಲೀಸ್ಪಡೆ
ಬಲವರ್ಧನೆಗೆ
3
ಸಾವಿರ
ಕೋಟಿ
ರೂ
*
ಬೆಂಗಳೂರಿನಲ್ಲಿ
ಜೈವಿಕ
ಅಭಿವೃದ್ಧಿ
ಕೇಂದ್ರ
ಸ್ಥಾಪನೆ