ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ
ಬೆಂಗಳೂರು, ಮೇ 17 : ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಮೂವರು ಶಾಸಕರು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆದ್ದರಿಂದ ಮುಂದಿನ ಆರು ತಿಂಗಳಿನಲ್ಲಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಲಿದೆ.
ಶಿವಮೊಗ್ಗದಲ್ಲಿ
ಗೆಲುವು
ದಾಖಲಿಸಿರುವ
ಮಾಜಿ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಅವರ
ಶಿಕಾರಿಪುರ
ವಿಧಾನಸಭಾ
ಕ್ಷೇತ್ರ,
ಬಳ್ಳಾರಿ
ಕ್ಷೇತ್ರದಿಂದ
ಗೆಲುವು
ಸಾಧಿಸಿರುವ
ಬಿ.ಶ್ರೀರಾಮುಲು
ಅವರ
ಬಳ್ಳಾರಿ
ಗ್ರಾಮೀಣ
ವಿಧಾನಸಭಾ
ಕ್ಷೇತ್ರ
ಮತ್ತು
ಚಿಕ್ಕೋಡಿ
ಕ್ಷೇತ್ರದಿಂದ
ಗೆಲುವು
ಸಾಧಿಸಿರುವ
ಸಚಿವ
ಪ್ರಕಾಶ್
ಹುಕ್ಕೇರಿ
ಚಿಕ್ಕೋಡಿ-ಸದಲಗಾ
ವಿಧಾನಸಭಾ
ಕ್ಷೇತ್ರದಲ್ಲಿ
ಉಪ
ಚುನಾವಣೆ
ಎದುರಾಗಲಿದೆ.
[ಕರ್ನಾಟಕದಲ್ಲಿ
ಗೆದ್ದವರು,
ಸೋತವರು]
ಬಿ.ಶ್ರೀರಾಮುಲು ಅವರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಕಾಶ್ ಹುಕ್ಕೇರಿ ಅವರು ರಾಜೀನಾಮೆ ನೀಡಿಲ್ಲ. ಯಡಿಯೂರಪ್ಪ ಅವರು ದೆಹಲಿ ವಿಮಾನವೇರಲಿದ್ದು, ಅವರ ಪುತ್ರ ಬಿ.ವೈ.ರಾಘವೇಂದ್ರ ಶಿಕಾರಿಪುರದದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. [ಫಲಿತಾಂಶದ ಬಗ್ಗೆ ಯಾರು ಏನು ಹೇಳಿದರು?]
ಹುಕ್ಕೇರಿ ತೀರ್ಮಾನ ನಿಗೂಢ : ಚಿಕ್ಕೋಡಿ ಕ್ಷೇತ್ರದಲ್ಲಿ ಜಯಗಳಿಸಿರುವ ಸಕ್ಕರೆ ಮತ್ತು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಸಂಸದ ಸ್ಥಾನ ಉಳಿಸಿಕೊಳ್ಳುತ್ತಾರೋ?, ಶಾಸಕ ಸ್ಥಾನ ಉಳಿಸಿಕೊಳ್ಳುತ್ತಾರೋ? ಎಂಬುದು ಇನ್ನೂ ಅಂತಿಮವಾಗಿಲ್ಲ.
ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ಹುಕ್ಕೇರಿ, "ನಾನು ರಾಜ್ಯ ರಾಜಕಾರಣದಲ್ಲಿರಬೇಕೋ ಸಂಸತ್ ಪ್ರವೇಶಿಸಬೇಕೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಸೋನಿಯಾ ಗಾಂಧಿ ಅವರ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಕಾಶ್ ಹುಕ್ಕೇರಿ ವಿಧಾನಸಭೆ ಅಥವ ಲೋಕಸಭೆ ಸ್ಥಾನ ಯಾವುದಕ್ಕೆ ರಾಜೀನಾಮೆ ನೀಡಿದರೂ ಉಪ ಚುನಾವಣೆ ನಡೆಯುವುದು ಖಂಡಿತ. ಆದ್ದರಿಂದ ರಾಜ್ಯದ ಮೂರು ಕ್ಷೇತ್ರದಲ್ಲಿ ಇನ್ನು ಆರು ತಿಂಗಳಿನಲ್ಲಿ ಉಪ ಚುನಾವಣೆ ಎದುರಾಗಲಿದೆ.
ಸ್ಪರ್ಧಿಸಿ ಸೋತವರು : ಎಚ್.ಡಿ.ಕುಮಾರಸ್ವಾಮಿ, ಎಸ್.ಎಸ್.ಮಲ್ಲಿಕಾರ್ಜುನ್, ವಿನಯ್ ಕುಲಕರ್ಣಿ, ಅರಕಲಗೋಡು ಮಂಜು ಸಹ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಎಲ್ಲರೂ ಸೋಲು ಅನುಭವಿಸಿದ್ದು, ಇವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವುದು ತಪ್ಪಿದೆ.