ದೇಶದಲ್ಲಿ ನಮೋ ಅಲೆಯನ್ನು ಕೃತಕವಾಗಿ ಸೃಷ್ಟಿಸಲಾಗಿದೆ
ಬೆಂಗಳೂರು, ಏ. 2 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ದೇಶದಲ್ಲಿ ಇಲ್ಲ. ಅದನ್ನು ಕೃತಕವಾಗಿ ಸೃಷ್ಟಿಸಲಾಗಿದೆ ಎಂದು ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿರುವ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ
ಬೆಂಗಳೂರಿನಲ್ಲಿ
ಚುನಾವಣಾ
ಪ್ರಚಾರ
ಆರಂಭಿಸಿಸುವ
ಮೊದಲು,
ತಮ್ಮ
ಸದಾಶಿವನಗರದ
ನಿವಾಸದಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಕೃಷ್ಣ,
ದೇಶದಲ್ಲಿ
ಬಿಜೆಪಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ
ಅವರ
ಅಲೆಯನ್ನು
ಕೃತಕವಾಗಿ
ಸೃಷ್ಟಿಸಲಾಗುತ್ತಿದೆ
ಎಂದು
ಹೇಳಿದರು.
ಕರ್ನಾಟಕದ
ಮತ್ತು
ದೇಶದಲ್ಲಿ
ಯಾವುದೇ
ಅಲೆ
ಇಲ್ಲ
ಎಂದು
ಅವರು
ತಿಳಿಸಿದರು.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
ಹಿಂದೆ ಭಾರತದಲ್ಲಿ 1971ರಲ್ಲಿ ಇಂದಿರಾ ಗಾಂಧಿ ಅವರ ಅಲೆ ಹಾಗೂ 1994ರಲ್ಲಿ ರಾಜೀವ್ ಗಾಂಧಿ ಅವರ ಅಲೆ ಇತ್ತು. ಸದ್ಯ ನರೇಂದ್ರ ಮೋದಿ ಅವರ ಅಲೆಯನ್ನು ಸೃಷ್ಟಿಸಲಾಗಿದೆಯೇ ಹೊರತು ದೇಶದಲ್ಲಿ ಯಾವುದೇ ಅಲೆ ಇಲ್ಲ ಎಂದು ಕೃಷ್ಣ ವಿಶ್ಲೇಷಿಸಿದರು. ತಮ್ಮ ರಾಜ್ಯದಲ್ಲಿ ಸಾವಿರಾರು ರೈತರನ್ನು ಬೀದಿಗೆ ತಳ್ಳಿ, ಉದ್ಯಮಿಗಳನ್ನು ಅಭಿವೃದ್ಧಿ ಮಾಡಿರುವುದು ಮೋದಿ ಅವರ ಸಾಧನೆ ಎಂದು ಕೃಷ್ಣ ಆರೋಪಿಸಿದರು.
ಬಿಜೆಪಿಯಲ್ಲಿ ಪಟ್ಟಕ್ಕಾಗಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ನರೇಂದ್ರ ಮೋದಿ ಹಾಗೂ ಸುಷ್ಮಾ ಸ್ವರಾಜ್ ನಡುವೆ ಕಿತ್ತಾಟ ನಡೆತ್ತು. ಮೋದಿ ಎಲ್.ಕೆ. ಆಡ್ವಾಣಿ ಅವರಂತಹ ಹಿರಿಯ ನಾಯಕರನ್ನು ಕಡೆಗಣಿಸಿ, ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಇದು ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಕೃಷ್ಣ ಹೇಳಿದರು.
ಪಕ್ಷದ ಅಭ್ಯರ್ಥಿಗಳಿಗೆ ಗೆಲುವು : ಕರ್ನಾಟಕದಲ್ಲಿಯೂ ನರೇಂದ್ರ ಮೋದಿ ಅಲೆ ಇಲ್ಲ. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ನಂದನ್ ನಿಲೇಕಣಿ ಅವರಿಂದಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮೂವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ ಎಂದು ಕೃಷ್ಣ ಹೇಳಿದರು.
ಪರಮೇಶ್ವರ್ ಸೋತಿದ್ದೇಕೆ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಎಂ. ಕೃಷ್ಣ, ಪರಮೇಶ್ವರ್ ಅವರು ಚುನಾವಣೆ ವೇಳೆ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರಲಿಲ್ಲ, ಸಂಪೂರ್ಣ ಕರ್ನಾಟಕದತ್ತ ಗಮನಹರಿಸಿದರು ಆದ್ದರಿಂದ ಅವರು ಸೋಲಬೇಕಾಯಿತು ಹಿಂದೆಯೂ ಕೆಪಿಸಿಸಿ ಅಧ್ಯಕ್ಷರು ಚುನಾವಣೆಯಲ್ಲಿ ಸೋತಿದ್ದರು ಎಂದು ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಎಸ್ಎಂ ಕೃಷ್ಣ, ಬೆಂಗಳೂರು ಸೆಂಟ್ರಕ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಪರ ಪ್ರಚಾರ ಶಿವಾಜಿನಗರ ಮುಂತಾದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಚಿವ ರೋಷನ್ ಬೇಗ್ ಮುಂತಾದವರು ಎಸ್ಎಂ ಕೃಷ್ಣ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.