ಬಿಜಾಪುರದಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
ಬಿಜಾಪುರ, ಜೂ. 17 : ಸರ್ಕಾರ ನಿಗದಿಪಡಿಸಿದ ದರದಲ್ಲೇ ಕಬ್ಬು ಖರೀದಿಸಬೇಕು. ಬಾಕಿ ಹಣವನ್ನು ತಕ್ಷಣವೇ ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಬೇಕೆಂದು ಕಬ್ಬು ಬೆಳೆಗಾರರು ಬಿಜಾಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರೊಂದಿಗೆ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಡೆಸಿದ ಮಾತುಕತೆ ವಿಫಲವಾಗಿದೆ.
ಸೋಮವಾರದಿಂದ
ಬಿಜಾಪುರ
ಜಿಲ್ಲಾಧಿಕಾರಿ
ಕಚೇರಿ
ಮುಂಭಾಗ
ಪ್ರತಿಭಟನೆ
ನಡೆಸುತ್ತಿರುವ
ರೈತರು,
ರಾತ್ರಿ
ಸಕ್ಕರೆ
ಕಾರ್ಖಾನೆ
ಆಡಳಿತ
ಮಂಡಳಿಯ
ಪ್ರತಿನಿಧಿಗಳನ್ನು
ಜಿಲ್ಲಾಧಿಕಾರಿ
ಕಚೇರಿಯಲ್ಲಿಯೇ
ಕೂಡಿಹಾಕಿ
ರಾತ್ರಿ
ಧರಣಿ
ಮುಂದುವರೆರಿಸಿದರು.
ಸಚಿವರ
ಕಾರಿಗೂ
ಮುತ್ತಿಗೆ
ಹಾಕಿದ
ರೈತರನ್ನು
ಚದುರಿಸಿದ
ಪೊಲೀಸರು,
ಜಿಲ್ಲಾಧಿಕಾರಿ
ಕಾರಿನಲ್ಲಿ
ಅವರನ್ನು
ಕಳುಹಿಸಿಕೊಟ್ಟರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಡುಗೆಗಳನ್ನು ಮಾಡಿಕೊಂಡು ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ರೈತರೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನಡೆಸಿದ ಮಾತುಕತೆ ಮುರಿದುಬಿದ್ದಿದೆ. ನ್ಯಾಯ ಸಿಗುವ ತನಕ ಅಹೋರಾತ್ರಿ ಪ್ರತಿಭಟನೆ ಮುಂದುವರೆಸುವುದಾಗಿ ರೈತರು ಘೋಷಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. [ಸಿದ್ದರಾಮಯ್ಯ ಸರ್ಕಾರಕ್ಕೆ ಸಕ್ಕರೆ ಕಾಯಿಲೆ!]
ಸರ್ಕಾರ ನಿಗದಿಪಡಿಸಿದ ದರದಲ್ಲೇ ಕಬ್ಬು ಖರೀದಿಸಬೇಕು. ಬಾಕಿ ಹಣವನ್ನು ತಕ್ಷಣವೇ ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಸರ್ಕಾರ, ಸಕ್ಕರೆ ಕಾರ್ಖನೆಗಳ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ರೈತರು, ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. [ಕೀಟನಾಶಕ ಸೇವಿಸಿ ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ]