ಆ.17: ಕರ್ನಾಟಕದ ಪಾಲಿಟಿಕ್ಸ್ ರೌಂಡ್ ಅಪ್
ಬೆಂಗಳೂರು, ಆ.17: ಕರ್ನಾಟಕದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೇ ಏರುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
ಶಿಕಾರಿಪುರ, ಚಿಕ್ಕೋಡಿ-ಸದಲಗಾ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಆ.21ರ ಗುರುವಾರ ಮತದಾನ ನಡೆಯಲಿದ್ದು, ಆ.25ರ ಸೋಮವಾರ ಮತ ಎಣಿಕೆ ನಡೆಯಲಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ [ಕಣದಲ್ಲಿರುವ ಅಭ್ಯರ್ಥಿಗಳು ಯಾರು?]
*
ರಾಜ್ಯದ
ಮೂರು
ವಿಧಾನಸಭಾ
ಕ್ಷೇತ್ರಗಳ
ಉಪಚುನಾವಣೆಯಲ್ಲಿ
ಬಿಜೆಪಿಗೆ
ಅಭೂತಪೂರ್ವ
ಗೆಲುವು
ಸಿಗುವುದು
ಶತಸಿದ್ಧ
ಎಂದು
ಸಂಸದ
ಹಾಗೂ
ಬಿಜೆಪಿ
ರಾಷ್ಟ್ರೀಯ
ಉಪಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ
ವಿಶ್ವಾಸ
ವ್ಯಕ್ತಪಡಿಸಿದ್ದಾರೆ.
*
ಭಾನುವಾರ
ಅಂಕಲಿಯ
ಶಿವ
ದೇವಾಲಯದಲ್ಲಿ
ವಿಶೇಷ
ಪೂಜೆ
ಸಲ್ಲಿಸಿದ
ಬಳಿಕ
ಸುದ್ದಿಗಾರರೊಂದಿಗೆ
ಯಡಿಯೂರಪ್ಪ
ಮಾತನಾಡಿ,
ಮೂರು
ಕ್ಷೇತ್ರಗಳ
ಬಿಜೆಪಿ
ಅಭ್ಯರ್ಥಿಗಳು
ಗೆಲುವು
ಸಾಧಿಸುವ
ಭರವಸೆ
ಇದೆ.
ಬಿಜೆಪಿ
ಗೆಲುವಿನಿಂದ
ರಾಜ್ಯ
ಸರ್ಕಾರಕ್ಕೆ
ಪಾಠ
ಕಲಿಸಲಿದ್ದೇವೆ.
ಬಿಜೆಪಿ
ಶಕ್ತಿ
ಪ್ರದರ್ಶಿಸಲಿದ್ದೇವೆ
ಎಂದರು.
*
ನಂತರ
ಯಡಿಯೂರಪ್ಪ
ಅವರು
ಶಿಕಾರಿಪುರಕ್ಕೆ
ತೆರಳಿ
ಮುದ್ದೆನಹಳ್ಳಿಯಲ್ಲಿ
ಪ್ರಚಾರ
ನಿರತರಾಗಿದ್ದಾರೆ.
ಬಿಎಸ್ವೈಗೆ
ಅನಂತಕುಮಾರ್,
ಜಿಎಂ
ಸಿದ್ದೇಶ್
ಮುಂತಾದ
ನಾಯಕರು
ಸಾಥ್
ನೀಡಿದ್ದಾರೆ.
* ಶಿಕಾರಿಪುರದಲ್ಲಿ ಬಿಎಸ್ ವೈ ಶಕ್ತಿ ಕುಂದಿದೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಇರುವ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಾಧ್ಯಕ್ಷ ರಾಷ್ಟ್ರಾಧ್ಯಕ್ಷ ಪಟ್ಟ ಕೈ ತಪ್ಪಿದೆ. ಬಿಜೆಪಿಯಲ್ಲಿ ಅವರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಶಿಕಾರಿಪುರದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
*
ಬಳ್ಳಾರಿಯಲ್ಲಿ
ಡಿಕೆಶಿ:
ಚುನಾವಣೆ
ಬಳಿಕೆ
ಸಿದ್ದರಾಮಯ್ಯ
ಬಳಿಕೆ
ಇಡೀ
ಸಚಿವ
ಸಂಪುಟ
ನಿಮ್ಮ
ಮುಂದೆ
ಬರಲಿದೆ.
ಆ
ಜವಾಬ್ದಾರಿ
ನನಗೆ
ಬಿಡಿ.
ಎಲ್ಲಾ
ಇಲಾಖೆಗಳೊಂದಿಗೆ
ಅಭಿವೃದ್ಧಿ
ಕಾರ್ಯಗಳ
ಬಗ್ಗೆ
ಚರ್ಚೆ
ನಡೆದಿದೆ
ಎಂದು
ಡಿಕೆ
ಶಿವಕುಮಾರ್
ಬಳ್ಳಾರಿಯಲ್ಲಿ
ಹೇಳಿಕೆ.
* ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನಾಯಕರ ದಂಡು ಸೇರಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್ ಹಾಗೂ ಕೆಎಚ್ ಮುನಿಯಪ್ಪ ಅವರು ಬೆಳಗಾವಿಯಿಂದ ಚಿಕ್ಕೋಡಿಗೆ ಬಸ್ ನಲ್ಲಿ ಪ್ರಯಾಣಿಸಿ ಮತಯಾಚನೆ ನಿರತರಾಗಿದ್ದಾರೆ.
*
ಬಿಜೆಪಿಯಲ್ಲಿ
ವ್ಯಕ್ತಿಪೂಜೆ
ನಡೆಯುತ್ತಿದೆ.
ಯುಪಿಎ
ಸರ್ಕಾರದ
ಜನಪರ
ಯೋಜನೆಗಳಿಗೆ
ವಿರೋಧ
ವ್ಯಕ್ತಪಡಿಸಿದವರಿಗೆ
ಈಗ
ಸತ್ಯ
ಅರ್ಥವಾಗಿದೆ.
ಜನ
ಪರ
ಯೋಜನೆ
ಘೋಷಿಸುವುದರಲ್ಲಿ
ಮೋದಿ
ಎತ್ತಿದ
ಕೈ.
ಚೆನ್ನಾಗಿ
ಭಾಷಣ
ಮಾಡುತ್ತಾರೆ
ಅಷ್ಟೇ
ಎಂದು
ಕೇಂದ್ರ
ಮಾಜಿ
ಸಚಿವ
ಮಲ್ಲಿಕಾರ್ಜುನ
ಖರ್ಗೆ
ಅಭಿಪ್ರಾಯಪಟ್ಟಿದ್ದಾರೆ.
*
ಭ್ರಷ್ಟ್ರಾಚಾರದ
ಬಗ್ಗೆ
ಮಾತನಾಡುವ
ನೈತಿಕ
ಹಕ್ಕು
ಬಿಜೆಪಿ
ಮುಖಂಡರಿಗೆ
ಇಲ್ಲ.
ಅನೇಕ
ನಾಯಕರ
ಮೇಲೆ
ಆರೋಪಗಳು
ಕೇಳಿ
ಬಂದಿವೆ
:
ಕೆಪಿಸಿಸಿ
ಅಧ್ಯಕ್ಷ
ಜಿ
ಪರಮೇಶ್ವರ್
ಹೇಳಿದ್ದಾರೆ.
* ಪ್ರಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕೋಡಿಯಲ್ಲಿ ಹೇಳಿದ್ದಾರೆ.
* ಶಿಕಾರಿಪುರದಲ್ಲಿ ಜೆಡಿಎಸ್ ಬೆಂಬಲ ಕೇಳಿರುವುದು ನಿಜ. ಬಿಜೆಪಿ ಮೇಲೇಳದಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
* ಕಾಂಗ್ರೆಸ್ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ಮತದಾರರು ಅವರ ಆತ್ಮಸಾಕ್ಷಿಗೆ ಯಾವ ಅಭ್ಯರ್ಥಿ ಸರಿ ಎನಿಸುತ್ತಾರೋ ಅವರಿಗೆ ಮತನೀಡಲಿ. ಮೈತ್ರಿ ಮಾಡಿಕೊಂಡು ಮತದಾರರಿಗೆ ಗೊಂದಲ ಮೂಡಿಸುವುದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಕೈ ಜೋಡಿಸಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.