ಸಿಎಂ ಸಿದ್ದು ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ
ಬೆಂಗಳೂರು, ಮೇ 9 : ಸಿಎಂ ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮೇ 16ರ ನಂತರ ಸಂಭ್ರಮಾಚರಣೆ ಏರ್ಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಕೆಪಿಸಿಸಿಯಿಂದ ಯಾವುದೇ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿಲ್ಲ.
ಕರ್ನಾಟಕದಲ್ಲಿ
ವಿಧಾನಸಭೆ
ಚುನಾವಣೆ
ಮುಗಿದು
ಮುಖ್ಯಮಂತ್ರಿಯಾಗಿ
ಸಿದ್ದರಾಮಯ್ಯ
ಅವರು
ಮೇ
13ರಂದು
ಪ್ರಮಾಣ
ವಚನ
ಸ್ವೀಕರಿಸಿದರು.
ಲೋಕಸಭೆ
ಚುನಾವಣೆ
ನೀತಿ
ಸಂಹಿತೆ
ಜಾರಿಯಲ್ಲಿರುವುದರಿಂದ
ಮೇ
16ರ
ನಂತರ
ಒಂದು
ವರ್ಷದ
ಸಂಭ್ರಮಾಚರಣೆ
ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ
ಎಂದು
ಸಿಎಂ
ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇಸುವ ಕುರಿತು ಗಮನಹರಿಸುತ್ತೇವೆ. ಆದ್ದರಿಂದ ಒಂದು ವರ್ಷದ ಸಂಭ್ರಮಾಚರಣೆಯನ್ನು ಕೆಪಿಸಿಸಿ ವತಿಯಿಂದ ಆಚರಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. [ಫಲಿತಾಂಶಕ್ಕೂ ಮುನ್ನ ಸಿಎಂ ಸಿದ್ದು ಮಹತ್ವದ ಸಭೆ]
ಮೇ 14ರಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ರಾಜ್ಯಕ್ಕೆ ಆಗಮಿಸಲಿದ್ದು, ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದರು. ಸಭೆಯಲ್ಲಿ ಒಂದು ವರ್ಷದ ಆಡಳಿತದ ಪರಾಮರ್ಶೆ ನಡೆಸಲಾಗುವುದು. ನಿಗಮ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿ ಕುರಿತಂತೆಯೂ ಚರ್ಚೆ ನಡೆಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಕೆ ಆಂಟನಿ ರಾಜ್ಯಕ್ಕೆ ಆಗಮಿಸಲಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಈಡೇರಿಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.