ಸರಣಿ ಅತ್ಯಾಚಾರ : ಇಂದಿನ ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಜು. 21 : ಕರ್ನಾಟಕದಲ್ಲಿ ನಡೆದ ಸರಣಿ ಅತ್ಯಾಚಾರ ಪ್ರಕರಣಗಳ ಕುರಿತು ಸೋಮವಾರವೂ ಸಹ ವಿವಿಧ ಕಡೆ ಪ್ರತಿಭಟನೆ ಮುಂದುವರೆದಿದೆ. ಸರ್ಕಾರ ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸಲು ಸಿದ್ಧ ಎಂದು ಘೋಷಿಸಿದೆ. ವಿಬ್ ಗಯಾರ್ ಶಾಲೆಯ ಮುಂದೆ ಇಂದು ಪ್ರತಿಭಟನೆ ನಡೆದಿದ್ದು, ಪ್ರತಿಭಟನಾನಿರತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಇಂದಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
ಬಿಜೆಪಿ ಪ್ರತಿಭಟನೆ : ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿತು. ಮಹಿಳಾ ಮೋರ್ಚಾದ ಸದಸ್ಯರು ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರೆ, ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಜು.26ರಂದು
ಕರ್ನಾಟಕ
ಬಂದ್
:
ಅತ್ಯಾಚಾರ
ಪ್ರಕರಣದ
ವಿರುದ್ಧ
ಸಮಗ್ರ
ತನಿಖೆಯಾಗಬೇಕು,
ಮಹಿಳೆಯರಿಗೆ
ಸೂಕ್ತ
ರಕ್ಷಣೆ
ನೀಡಬೇಕು
ಎಂದು
ಆಗ್ರಹಿಸಿ
ಕನ್ನಡ
ಚಳವಳಿ
ವಾಟಾಳ್
ಪಕ್ಷ
ಜು.26ರಂದು
ಕರ್ನಾಟಕ
ಬಂದ್
ಗೆ
ಕರೆ
ನೀಡಿದೆ.
ವಿವಿಧ
ಕನ್ನಡ
ಪರ
ಸಂಘಟನೆಗಳು,
ರಾಜಕೀಯ
ಪಕ್ಷಗಳು
ಬಂದ್
ಗೆ
ಬೆಂಬಲ
ನೀಡುವಂತೆ
ಮನವಿ
ಮಾಡಲಾಗಿದೆ.
[ಕರ್ನಾಟಕ
ಬಂದ್
ಗೆ
ವಾಟಾಳ್
ಕರೆ]
ಸಿಎಂ ನೇತೃತ್ವದಲ್ಲಿ ಸಭೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನ ಸೌಧದಲ್ಲಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಸಚಿವರಾದ ಕೆ.ಜೆ. ಜಾರ್ಜ್,ಟಿ.ಬಿ. ಜಯಚಂದ್ರ, ಯು.ಟಿ. ಖಾದರ್, ಕಿಮ್ಮನೆ ರತ್ನಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜೀ, ರಾಜ್ಯ ಪೋಲೀಸ್ ಮಹಾನಿರ್ದೇಶಕ ಲಾಲ್ ರೋಖುಮಾ ಪಚಾವೋ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಗೃಹ ಇಲಾಖೆ ಶಾಲೆಗಳಿಗೆ ನೀಡಿರುವ ಮಾರ್ಗಸೂಚಿ ಕಡ್ಡಾಯಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ವಿಬ್ ಗಯಾರ್ ಮುಂದೆ ಪ್ರತಿಭಟನೆ : ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶಾಲೆಯ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಬ್ಯಾಡಿಕೇಡ್ ಗಳ ಮೇಲೆ ಹತ್ತಿ ಪ್ರತಿಭಟನಾಕಾರರು ಶಾಲೆಗೆ ನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.
ಅತ್ಯಾಚಾರಿ ವಿರುದ್ಧ ಗೂಂಡಾ ಕಾಯ್ದೆ : ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಸೋಮವಾರ ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಚರ್ಚೆ ನಡೆಯಿತು. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಅಗತ್ಯವಿರುವ ಎಲ್ಲಾ ಕಾನೂನು ತಿದ್ದುಪಡಿಯನ್ನು ಮಾಡಲು ಸರ್ಕಾರ ಸಿದ್ಧವಿದೆ. ಶಾಲೆಯಲ್ಲಿ 1 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಮುಸ್ತಫಾ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. [ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ]
ವಿಕಾಸಸೌಧದಲ್ಲಿ
ಪೋಷಕರೊಂದಿಗೆ
ಸಭೆ
:
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಕಿಮ್ಮನೆ
ರತ್ನಾಕರ್
ವಿಬ್
ಗಯಾರ್
ಶಾಲೆಯ
ಮಕ್ಕಳ
ಪೋಷಕರೊಂದಿಗೆ
ವಿಕಾಸೌಧದಲ್ಲಿ
ಸೋಮವಾರ
ಸಭೆ
ನಡೆಸಿದರು.
ಶಾಲೆಯಲ್ಲಿ
3,500
ಮಕ್ಕಳು
ಓದುತ್ತಿದ್ದು,
ಶಾಲೆಗೆ
ಸರ್ಕಾರದಿಂದ
ಪ್ರತಿನಿಧಿಯನ್ನು
ನೇಮಿಸಬೇಕು
ಎಂದು
ಸಭೆಯಲ್ಲಿ
ಪೋಷಕರು
ಸಚಿವರಿಗೆ
ಮನವಿ
ಸಲ್ಲಿಸಿದರು.
ಪೋಷಕರ
ಮನವಿಗೆ
ಸ್ಪಂದಿಸಿದ
ಸಚಿವರು
ಈ
ಕುರಿತು
ಮಂಗಳವಾರ
ಆಡಳಿತ
ಮಂಡಳಿ
ಜೊತೆ
ಚರ್ಚೆ
ನಡೆಸುವುದಾಗಿ
ಭರವಸೆ
ನೀಡಿದರು.
ಪೊಲೀಸ್ ಇಲಾಖೆಗೆ ಸರ್ಜರಿ : ರಾಜ್ಯದಲ್ಲಿನ ಸರಣಿ ಅತ್ಯಾಚಾರಗಳ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಎನ್.ರೆಡ್ಡಿ ಅವರನ್ನು ನೇಮಕ ಮಾಡಲಾಗಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿದೆ. ಔರಾದ್ಕರ್ ಅವರನ್ನು ಕೆಎಸ್ಆರ್ ಪಿ ಎಡಿಜಿಪಿಯಾಗಿ ನೇಮಿಸಲಾಗಿದೆ.
ಹಲವು ಕಡೆ ಬಿಜೆಪಿ ಪ್ರತಿಣಭಟನೆ : ಸರಣಿ ಅತ್ಯಾಚಾರಗಳನ್ನು ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಂದು ಧಾರವಾಡ, ಮೈಸೂರು, ತುಮಕೂರು, ಮಂಡ್ಯ, ಕೋಲಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.