ಕುಡಿಯುವ ನೀರು ಪೂರೈಕೆಗಾಗಿ ಪ್ರತ್ಯೇಕ ಖಾತೆ
ಬೆಂಗಳೂರು, ಮೇ 1 : ಕರ್ನಾಟಕ ಸರ್ಕಾರ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಲಾಗಿದೆ. ಆಗಸ್ಟ್ 15ರೊಳಗೆ ಈ ಇಲಾಖೆ ತನ್ನ ಕಾರ್ಯವನ್ನು ಆರಂಭಿಸಲಿದೆ.
ಹೊಸ
ಇಲಾಖೆ
ಕುರಿತು
ಮಾಹಿತಿ
ನೀಡಿರುವ
ಗ್ರಾಮೀಣಾಭಿವೃದ್ಧಿ
ಸಚಿವ
ಎಚ್.ಕೆ.ಪಾಟೀಲ್,
ಪ್ರತಿಯೊಬ್ಬ
ವ್ಯಕ್ತಿಗೂ
ಶುದ್ಧ
ಕುಡಿಯುವ
ನೀರು
ಪೂರೈಕೆ
ಮಾಡುವುದು
ಸರ್ಕಾರದ
ಉದ್ದೇಶವಾಗಿದೆ.
ಆದ್ದರಿಂದ
ಕುಡಿಯುವ
ನೀರು
ಹಾಗೂ
ನೈರ್ಮಲ್ಯಕ್ಕೆ
ಸಂಬಂಧಿಸಿದಂತೆ
ಈ
ಇಲಾಖೆ
ಆರಂಭಿಸಲಾಗಿದೆ
ಎಂದು
ಹೇಳಿದರು.
ಸಹಾಯವಾಣಿ ಆರಂಭಿಸಲಾಗಿದೆ : ಸರ್ಕಾರ ಜಿಲ್ಲಾ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಜಿಲ್ಲಾ ಪಂಚಾಯಿತಿ ಕಚೇರಿ ವ್ಯಾಪ್ತಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. [ಕುಡಿಯುವ ನೀರಿನ ಸಮಸ್ಯೆ ಇದೆಯೇ ಕರೆಮಾಡಿ]
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ಸಹಾಯವಾಣಿಗೆ ನೇಮಿಸಲಾಗಿದೆ. ನಿಯಂತ್ರಣ ಕೊಠಡಿ ಹಾಗೂ ಸಹಾಯವಾಣಿಗೆ ಬರುವ ದೂರು, ಮಾಹಿತಿ, ಅಹವಾಲುಗಳ ಮೇಲೆ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದದರು. ಸಹಾಯವಾಣಿ ಆರಂಭಿಸಿದ ಮಂಗಳವಾರ ಒಂದೇ ದಿನ 4400 ದೂರವಾಣಿ ಕರೆಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿನ ಕುರಿತು ದೂರುಗಳ ಬಂದ 8 ಗಂಟೆಯೊಳಗೆ ಸಮಸ್ಯೆ ಬಗರಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ನೀರಿನ ಕೊರತೆ ಇದ್ದರೆ ಟ್ಯಾಂಕರ್ ಮೂಲಕವಾದರೂ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.