ಜಾರ್ಜ್ ರಾಜೀನಾಮೆ ಪಡೆಯಿರಿ, ಸೋನಿಯಾಗೆ ಪತ್ರ
ಬೆಂಗಳೂರು, ಆ.12 : ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಎಐಸಿಸಿ
ಅಧ್ಯಕ್ಷೆ
ಸೋನಿಯಾ
ಗಾಂಧಿ
ಅವರಿಗೆ
ಬರೆದಿರುವ
ಪತ್ರದಲ್ಲಿ
ಬಿಜೆಪಿ
ರಾಜ್ಯಾಧ್ಯಕ್ಷ
ಪ್ರಹ್ಲಾದ್
ಜೋಶಿ
ಅವರು,
ಕಳೆದ
ಕೆಲವು
ತಿಂಗಳುಗಳಿಂದ
ಕರ್ನಾಟಕದಲ್ಲಿ
ಕಾನೂನು
ಹಾಗೂ
ಸುವ್ಯವಸ್ಥೆ
ಹದಗೆಟ್ಟಿದೆ.
ಗೃಹ
ಸಚಿವ
ಕೆ.ಜೆ.ಜಾರ್ಜ್
ಪುತ್ರ
ಮದ್ಯಪಾನ
ಮಾಡಿದ
ತನ್ನ
ಸ್ನೇಹಿತರನ್ನು
ಬಿಡಿಸಲು
ಕರ್ತವ್ಯನಿರತ
ಪೊಲೀಸರ
ಮೇಲೆಯೇ
ಹಲ್ಲೆ
ನಡೆಸಿದ್ದಾನೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕರು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿವೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮಾಡಬೇಕಾದ ಗೃಹ ಸಚಿವರು ಅಗತ್ಯಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ
ನಡೆದ
ಸರಣಿ
ಅತ್ಯಾಚಾರ
ಪ್ರಕರಣಗಳಿಂದ
ಜನರು
ಆತಂಕಗೊಂಡಿದ್ದಾರೆ.
ಗೃಹ
ಸಚಿವರು
ಅತ್ಯಾಚಾರ
ಪ್ರಕರಣಗಳನ್ನು
ನಿರ್ಲಕ್ಷಿಸುತ್ತಿದ್ದಾರೆ.
ಪಕ್ಷದ
ಹೈಕಮಾಂಡ್
ಒತ್ತಡದಿಂದಾಗಿ
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಜಾರ್ಜ್
ರಾಜೀನಾಮೆ
ಪಡೆಯಲು
ಅಸಮರ್ಥರಾಗಿದ್ದಾರೆ
ಎಂದು
ಪತ್ರದಲ್ಲಿ
ತಿಳಿಸಿದ್ದಾರೆ.
ರಾಜ್ಯದ ಗೃಹ ಸಚಿವರಿಗೆ ಸಲಹೆಗಾರರನ್ನು ನೇಮಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಸೋನಿಯಾ ಗಾಂಧಿ ಅವರು ಗೃಹ ಸಚಿವರ ರಾಜೀನಾಮೆ ಪಡೆಯುವಂತೆ ಸಿಎಂಗೆ ಸೂಚನೆ ನೀಡಬೇಕು ಎಂದು ಪ್ರಹ್ಲಾದ್ ಜೋಶಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.