ಮೂರು ಕ್ಷೇತ್ರಗಳ ಉಪ ಚುನಾವಣೆಗೆ ವೇತನ ಸಹಿತ ರಜೆ
ಬೆಂಗಳೂರು, ಆ.9 : ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯುವ ಆ.21ರಂದು ಮತ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಖನೆಗಳ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಬೇಕೆಂದು ಕೈಗಾರಿಕಾ ಇಲಾಖೆ ಎಲ್ಲಾ ಕಾರ್ಖನೆಗಳಿಗೆ ಸೂಚನೆ ನೀಡಿದೆ.
ಈ
ಕುರಿತು
ಕೈಗಾರಿಕಾ
ಇಲಾಖೆ
ಪತ್ರಿಕಾ
ಪ್ರಕಟಣೆ
ಹೊರಡಿಸಿದ್ದು,
ಆ.21ರ
ಗುರುವಾರ
ಚಿಕ್ಕೋಡಿ-ಸದಲಗಾ,
ಬಳ್ಳಾರಿ
ಹಾಗೂ
ಶಿಕಾರಿಪುರ
ವಿಧಾನಸಭಾ
ಕ್ಷೇತ್ರದ
ಉಪಚುನಾವಣೆ
ನಡೆಯಲಿದ್ದು,
ಅಂದು
ಕಾರ್ಖನೆಯ
ಎಲ್ಲಾ
ಸಿಬ್ಬಂದಿಗೂ
ವೇತನ
ಸಹಿತ
ರಜೆ
ನೀಡುವಂತೆ
ಆದೇಶದಲ್ಲಿ
ತಿಳಿಸಿದೆ.
ಮತದಾನದ ದಿನದಂದು ಮತಕ್ಷೇತ್ರಗಳ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಖಾನೆ, ಕೈಗಾರಿಕಾ ಸಂಸ್ಥೆಗಳ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಬೇಕು. 1951ರ ಪ್ರಜಾ ಪ್ರಾತಿನಿಧ್ಯ ಅಧಿನಯಮ 135 (ಬಿ) ಅನ್ವಯ ರಜೆ ಘೋಷಿಸುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. [2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ]
ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ಅರ್ಹ ಕಾರ್ಮಿಕರಿಗೂ ಕಡ್ಡಾಯವಾಗಿ ವೇತನ ಸಹಿತ ರಜೆ ನೀಡಬೇಕು. ತಪ್ಪಿದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಮೂವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ಶಾಸಕ ಸ್ಥಾನ ತೊರೆದಿದ್ದರು.
ಚುನಾವಣೆ
ಎಲ್ಲೆಲ್ಲಿ
ಶಿಕಾರಿಪುರ
ಬಳ್ಳಾರಿ
ಗ್ರಾಮಾಂತರ
ಚಿಕ್ಕೋಡಿ-ಸದಲಗಾ
ವಿಧಾನಸಭಾ
ಕ್ಷೇತ್ರಗಳು.