ಐಎಎಸ್, ಕೆಎಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಬೇಕು
ಬೆಂಗಳೂರು, ಜು. 9 : ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಆಸ್ತಿ ವಿವರ ಸಲ್ಲಿಸದ 6 ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಂಗಳವಾರ
ವಿಧಾನಸಭೆಯಲ್ಲಿ
ಜೆಡಿಎಸ್
ಶಾಸಕ
ಎಚ್.ಡಿ.ರೇವಣ್ಣ
ಪ್ರಶ್ನೆಗೆ
ಉತ್ತರಿಸಿದ
ಸಿಎಂ
ಸಿದ್ದರಾಮಯ್ಯ
ಅವರು,
ನಿಯಮದಂತೆ
ಐಎಎಸ್,
ಐಪಿಎಸ್
ಮತ್ತು
ಕೆಎಎಸ್
ಅಧಿಕಾರಿಗಳು
ಸಕಾಲಕ್ಕೆ
ಆಸ್ತಿ
ವಿವರ
ಸಲ್ಲಿಸಬೇಕು.
ಇಲ್ಲದಿದ್ದರೆ
ಅವರ
ವಿರುದ್ಧ
ಕಾನೂನು
ಪ್ರಕಾರ
ಕ್ರಮ
ಕೈಗೊಳ್ಳಲಾಗುತ್ತದೆ
ಎಂದರು.
61 ಐಎಎಸ್ ದರ್ಜೆಯ ಅಧಿಕಾರಿಗಳು ಮತ್ತು 184 ಕೆಎಎಸ್ ಅಧಿಕಾರಿಗಳು ಇನ್ನು ಆಸ್ತಿ ವಿವರ ಸಲ್ಲಿಸಿಲ್ಲ. ಈಗಾಗಲೇ ಈ ಕುರಿತು ನೋಟಿಸ್ ಜಾರಿಗೊಳಿಸಲಾಗಿದೆ. 6 ಕೆಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದರು. [ಸಂಪಾದಕರು ಆಸ್ತಿ ಘೋಷಿಸಲಿ: ರೋಷನ್ ಬೇಗ್]
ನಾವು ಸಲ್ಲಿಸುವುದಿಲ್ಲವೆ? : ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು, ಶಾಸಕರು ಪ್ರತಿವರ್ಷ ಸರಿಯಾದ ಸಮಯಕ್ಕೆ ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುತ್ತಾರೆ. ಆದರೆ, ಅಧಿಕಾರಿಗಳು ಮಾತ್ರ ಯಾವಾಗ ಬೇಕಾದರೂ ಸಲ್ಲಿಸಬಹುದೇ? ಅದಕ್ಕೆ ಯಾವುದೇ ಕಾಲಮಿತಿ ಇಲ್ಲವೇ? ಎಂದು ಪ್ರಶ್ನಸಿದರು.
ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರೇ ಆಗಲಿ ಬಿಡುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕ ಜೀವನದಲ್ಲಿರುವ ನಾವು ಅಧಿಕಾರಿಗಳಿಗಿಂತ ಹೆಚ್ಚು ಜವಾಬ್ದಾರರು. ಅಧಿಕಾರಿಗಳು ಇದಕ್ಕೆ ಹೊರತಾಗಿಲ್ಲ ಸರಿಯಾದ ಸಮಯಕ್ಕೆ ಆಸ್ತಿ ವಿವರ ಸಲ್ಲಿಸದಿದ್ದರೆ, ಕ್ರಮ ಅನಿವಾರ್ಯ ಎಂದರು.
ದೊಡ್ಡ ಸುದ್ದಿ ಮಾಡ್ತಾರೆ : ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಗೋವಿಂದ ಎಂ ಕಾರಜೋಳ, ಶಾಸಕರು ಆಸ್ತಿ ವಿವರ ಸಲ್ಲಿಸದಿದ್ದರೆ ದೊಡ್ಡ ಸುದ್ದಿಯಾಗುತ್ತದೆ. ಅಧಿಕಾರಿಗಳು ಸಲ್ಲಿಸದಿದ್ದರೆ ಯಾರೂ ಕೇಳುವುದಿಲ್ಲ ಎಂದು ಹೇಳಿದರು.