ಸೆ.1ರಂದು ನೂತನ ರಾಜ್ಯಪಾಲರ ಪ್ರಮಾಣ ವಚನ
ಬೆಂಗಳೂರು, ಆ.28 : ವಜುಭಾಯ್ ರುಡಾಭಾಯ್ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ಸೆ.1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಂಗಳವಾರ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು.
ಗುಜರಾತ್
ವಿಧಾನಸಭೆ
ಸ್ಪೀಕರ್
ಆಗಿರುವ
ವಜುಭಾಯ್
ರುಡಾಭಾಯ್
ವಾಲಾ
(76)
ಅವರನ್ನು
ಕರ್ನಾಟಕ
ರಾಜ್ಯಪಾಲರಾಗಿ
ನೇಮಕಗೊಳಿಸಲಾಗಿದೆ.
ಸೆ.1
ರ
ಸೋಮವಾರ
ಸಂಜೆ
5
ಗಂಟೆಗೆ
ರಾಜಭವನದಲ್ಲಿ
ನಡೆಯಲಿರುವ
ಸಮಾರಂಭದಲ್ಲಿ
ಹೈಕೋರ್ಟ್
ಮುಖ್ಯನ್ಯಾಯಮೂರ್ತಿ
ಡಿ.ಎಚ್.ವಘೇಲಾ
ಪ್ರಮಾಣ
ವಚನ
ಬೋಧಿಸಲಿದ್ದಾರೆ.
ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ತಮ್ಮ ಅವಧಿ ಮುಗಿದ ಹಿನ್ನಲೆಯಲ್ಲಿ ಜೂ.28 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ, ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಿಗೆ ರಾಜ್ಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿತ್ತು. [ಸೌರಾಷ್ಟ್ರದ ವಜುಭಾಯಿ ಕರ್ನಾಟಕದ ಪ್ರಥಮ ಪ್ರಜೆ]
ಪ್ರಧಾನಿ ನರೇಂದ್ರ ಮೋದಿ ಅವರ ಊರಿನ ಹಿರಿಯ ರಾಜಕಾರಣಿಯಾದ ವಜುಭಾಯಿ ಅವರನ್ನು ಕರ್ನಾಟಕದ ಪ್ರಥಮ ಪ್ರಜೆಯಾಗಿ ಆಯ್ಕೆ ಮಾಡಲಾಗಿದೆ. ಗುಜರಾತಿನಲ್ಲಿ ಸ್ಪೀಕರ್, ವಿತ್ತ ಸಚಿವ, ಕಾರ್ಮಿಕ ಮತ್ತು ಉದ್ಯೋಗ, ರಾಜ್ ಕೋಟ್ ನ ಮೇಯರ್, ಶಾಸಕರಾಗಿ ವಜುಭಾಯಿ ಕಾರ್ಯನಿರ್ವಹಿಸಿದ್ದಾರೆ.
ರಾಘವೇಂದ್ರ ಪ್ರಮಾಣ ವಚನ : ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಬಿ.ವೈ.ರಾಘವೇಂದ್ರ ಅವರು ಗುರುವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಕೊಠಡಿಯಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಾಘವೇಂದ್ರ ಅವರಿಗೆ ಪ್ರಮಾಣ ವಚನ ಬೋಧಿಸಿದರು. [ಮಗನಿಗೆ ಶಿಕಾರಿಪುರ ದಕ್ಕಿಸಿಕೊಟ್ಟ ಯಡಿಯೂರಪ್ಪ]