ಭಾಷಾ ಮಾಧ್ಯಮ ತೀರ್ಪಿನ ವಿರುದ್ಧ ಮೇಲ್ಮನವಿ
ಬೆಂಗಳೂರು, ಮೇ 21 : ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಜೂ.6ರೊಳಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಂಗಳವಾರ
ಭಾಷಾ
ಮಾಧ್ಯಮ
ತೀರ್ಪಿಗೆ
ಸಂಬಂಧಿಸಿದಂತೆ
ಸರ್ಕಾರ
ತೆಗೆದುಕೊಳ್ಳಬೇಕಾದ
ಕ್ರಮಗಳ
ಕುರಿತು
ಚರ್ಚಿಸಲು
ವಿಧಾನಸೌಧದಲ್ಲಿ
ಸುಪ್ರೀಂಕೋರ್ಟ್
ವಿಶ್ರಾಂತ
ನ್ಯಾಯಮೂರ್ತಿಗಳ
ಜತೆ
ಸಿಎಂ
ಸಿದ್ದರಾಮಯ್ಯ
ಸಭೆ
ನಡೆಸಿದರು.
ಸಭೆಯ
ಬಳಿಕ
ಮಾತನಾಡಿ
ಸಿಎಂ
ಜೂ.6ರೊಳಗೆ
ಸುಪ್ರೀಂ
ತೀರ್ಪಿನ
ಕುರಿತು
ಪರಿಶೀಲನಾ
ಅರ್ಜಿ
ಸಲ್ಲಿಸಲಾಗುವುದು
ಎಂದರು.[ಸುಪ್ರೀಂ
ತೀರ್ಪಿನಲ್ಲೇನಿದೆ?]
ತೀರ್ಪು ಹೊರಬಿದ್ದ 30 ದಿನದೊಳಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ತೀರ್ಪಿನ ಕುರಿತು ಹಲವಾರು ಸಲಹೆಗಳನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಭಾಷಾ ಮಾಧ್ಯಮ ಕುರಿತ ಕರ್ನಾಟಕ ಸರ್ಕಾರ ನಿಲುವಿಗೆ ಬೆಂಬಲ ನೀಡುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಅವರು ತಿಳಿಸಿದರು. [ಕನ್ನಡ ಮಾಧ್ಯಮ- ಸುಪ್ರೀಂ ತೀರ್ಪು ಸ್ವಾಗತಾರ್ಹ: ಕುಸ್ಮಾ]
ಸಭೆಯ ನಂತರ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಬಿಟ್ಟರೆ ಬೇರೆ ಮಾರ್ಗಗಳಿಲ್ಲ. ಭಾಷಾನೀತಿ ಕುರಿತಂತೆ ಕೇಂದ್ರ ಸರಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ರಾಜಕೀಯವಾಗಿಯೂ ಈ ವಿಷಯದಲ್ಲಿ ಒತ್ತಡ ತರುವ ಕೆಲಸ ಆಗಬೇಕಾಗಿದೆ ಎಂದರು.
ಸಿಎಂ ಕರೆದಿದ್ದ ಸಭೆಯಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.