ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು?
ಬೆಂಗಳೂರು, ಜೂ.9 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯದಿನವಾಗಿದೆ. ಬಿಜೆಪಿ, ಜೆಡಿಎಸ್ ಸೇರಿದಂತೆ ಐವರು ಅಭ್ಯರ್ಥಿಗಳು ಇದುವರೆಗೂ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಎರಡೂ
ಚುನಾವಣೆಗೆ
ನಾಮಪತ್ರ
ಸಲ್ಲಿಸಲು
ಜೂ.9ರ
ಸೋಮವಾರ
ಮಧ್ಯಾಹ್ನ
3
ಗಂಟೆಯ
ತನಕ
ಅವಕಾಶವಿದೆ.
ರಾಜ್ಯಸಭೆಯ
ನಾಲ್ಕು
ಮತ್ತು
ವಿಧಾನ
ಪರಿಷತ್ತಿನ
ಏಳು
ಸ್ಥಾನಗಳಿಗೆ
ಜೂ.19ರಂದು
ಮತದಾನ
ನಡೆಯಲಿದೆ.
ರಾಜ್ಯಸಭೆ
ಚುನಾವಣೆಗಾಗಿ
ಬಿಜೆಪಿಯಿಂದ
ಪ್ರಭಾಕರ
ಕೋರೆ
ಮತ್ತು
ಜೆಡಿಎಸ್
ಅಭ್ಯರ್ಥಿಯಾಗಿ
ಕುಪೇಂದ್ರ
ರೆಡ್ಡಿ
ನಾಮಪತ್ರ
ಸಲ್ಲಿಸಿದ್ದರೆ,
ಪಕ್ಷೇತರ
ಅಭ್ಯರ್ಥಿಯಾಗಿ
ಕೆ.ಎ.ಮೋಹನ್
ಕಣಕ್ಕಿಳಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮತ್ತು ಜೆಡಿಎಸ್-ಬಿಜೆಪಿ ಒಮ್ಮತದ ಅಭ್ಯರ್ಥಿಯಾಗಿ ಡಿ.ಯು. ಮಲ್ಲಿಕಾರ್ಜುನ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. [ಈಶ್ವರಪ್ಪ, ರೆಡ್ಡಿ, ಕೋರೆ ನಾಮತ್ರ ಸಲ್ಲಿಕೆ]
ಕಾಂಗ್ರೆಸ್ ಪಕ್ಷದಲ್ಲಿ ಹಗ್ಗ ಜಗ್ಗಾಟ : ರಾಜ್ಯಸಭೆ ಚುನಾವಣೆಗೆ ಬಿ.ಕೆ.ಹರಿಪ್ರಸಾದ್ ಹಾಗೂ ಎಸ್.ಎಂ.ಕೃಷ್ಣ ಅವರ ಹೆಸರು ಕೇಳಿಬಂದಿತ್ತು. ಆದರೆ, ಶನಿವಾರ ಸಂಜೆಯಿಂದ ಐಐಎಂ ಪ್ರೊ. ರಾಜೀವ್ ಗೌಡ ಹೆಸರು ಸೇರ್ಪಡೆಯಾಗಿದೆ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು, ಇಕ್ಬಾಲ್ ಅಹ್ಮದ್ ಸರಡಗಿ ಪರ ಬ್ಯಾಂಟಿಗ್ ನಡೆಸುತ್ತಿದ್ದು, ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಹಗ್ಗ-ಜಗ್ಗಾಟ ಆರಂಭವಾಗಿದೆ.
ಪರಿಷತ್ ಲೆಕ್ಕಾಚಾರ : ಇನ್ನು ವಿಧಾನಪರಿಷತ್ ಚುನಾವಣೆಗಾಗಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಚ್.ಎಂ.ರೇವಣ್ಣ, ಐವಾನ್ ಡಿಸೋಜಾ ಮತ್ತು ಜಯಮ್ಮ ಬಾಲಕೃಷ್ಣ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ. ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಅವರ ಹೆಸರಿತ್ತು. ಆದರೆ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಜಯಮ್ಮ ಬಾಲಕೃಷ್ಣ ಅವರ ಹೆಸರು ಸೇರಿಕೊಂಡಿರುವುದರಿಂದ ಉಗ್ರಪ್ಪ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳಿಗೆ ನೇರವಾಗಿ ಸೂಚನೆ ನೀಡಿ, ಸೋಮವಾರ ನಾಮಪತ್ರ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯಹ್ನಾ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ನಂತರ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.