ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?
ಬೆಂಗಳೂರು, ಮೇ 28 : ಮಂಡ್ಯ ಕಾಂಗ್ರೆಸ್ ಭಿನ್ನಮತ ಬೆಂಗಳೂರಿಗೆ ತಲುಪಿದೆ. ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಅವರ ಸೋಲಿಗೆ ಅವರ ವರ್ತನೆಯೇ ಕಾರಣ ಎಂದು ಹೇಳಿರುವ ಮಂಡ್ಯ ಕಾಂಗ್ರೆಸ್ ಮುಖಂಡ ಎಲ್.ಆರ್.ಶಿವರಾಮೇ ಗೌಡ, ರಮ್ಯಾ ಸೋಲಿಗೆ ಜಿಲ್ಲಾ ನಾಯಕರು ಕಾರಣ ಎನ್ನುವುದಾದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಮಾಜಿ
ಶಾಸಕ
ಮತ್ತು
ಮಂಡ್ಯ
ಜಿಲ್ಲಾ
ಕಾಂಗ್ರೆಸ್
ಮುಖಂಡ
ಎಲ್.ಆರ್.ಶಿವರಾಮೇಗೌಡ
ಬೆಂಗಳೂರಿನಲ್ಲಿ
ಬುಧವಾರ
ಪತ್ರಿಕಾಗೋಷ್ಠಿ
ನಡೆಸಿದರು.
ನನ್ನ
ಸೋಲಿಗೆ
ಜಿಲ್ಲಾ
ನಾಯಕರ
ಒಗ್ಗಟ್ಟಿನ
ಕೊರತೆಯೇ
ಕಾರಣ
ಎಂದು
ಹೇಳಿರುವ
ಮಾಜಿ
ಸಂಸದೆ
ರಮ್ಯಾ
ವಿರುದ್ಧ
ಅಸಮಾಧಾನ
ವ್ಯಕ್ತಪಡಿಸಿದರು.
ಮಂಡ್ಯ ಕಾಂಗ್ರೆಸ್ ನಲ್ಲಿನ ಬ್ಬರು ನಾಯಕರು ತಿಕ್ಕಾಟದಿಂದ ನಾನು ಸೋಲನುಭವಿಸಿದೆ ಎಂದು ರಮ್ಯಾ ಹೈಕಮಾಂಡ್ ದೂರು ನೀಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ರಮ್ಯಾ ಅವರ ವರ್ತನೆಯೇ ಅವರ ಸೋಲಿಗೆ ಕಾರಣ. ಅವರು ಜಿಲ್ಲಾ ನಾಯಕರ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಶಿವರಾಮೇಗೌಡ ಒತ್ತಾಯಿಸಿದರು. [ಅಂಬರೀಷ್, ಎಸ್ಸೆಂ ಕೃಷ್ಣ ವಿರುದ್ಧ ದೂರಿಲ್ಲ: ರಮ್ಯಾ]
ಎಲ್.ಆರ್. ಶಿವರಾಮೇಗೌಡ ಸೇರಿದಂತೆ ಹಲವು ಅಂಬರೀಷ್ ಬೆಂಬಲಿಗರು ಪತ್ರಿಕಾಗೋಷ್ಠಿಯಲ್ಲಿ, ಮಂಡ್ಯದಲ್ಲಿ ರಮ್ಯಾ ಸೋಲಿಗೆ ರಮ್ಯಾ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ರಮ್ಯಾರ ಬೇಜವಾಬ್ದಾರಿ ವರ್ತನೆಯೇ ಅವರ ಸೋಲಿಗೆ ಕಾರಣವಾಗಿದೆ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಯಾದರೂ ರಮ್ಯಾರನ್ನು ಗೆಲ್ಲಿಸಿದ್ದೆವು. ಗೆದ್ದ ನಂತರ ರಮ್ಯಾ ಯಾವ ನಾಯಕರನ್ನು ಪರಿಗಣಿಸಲಿಲ್ಲ. ನಮ್ಮೆಲ್ಲರನ್ನೂ ನಿರ್ಲಕ್ಷಿಸಿದರು. ಆದ್ದರಿಂದ ಜನರು ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. [ಮಂಡ್ಯ ಮನೆ ಖಾಲಿ ಮಾಡಿದ ರಮ್ಯಾ]
ಅಂಬರೀಶ್ ಅವರು ಮಲೇಷಿಯಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೂ ನಮ್ಮನ್ನು ಕರೆಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದರು. ನಾವು ನಮ್ಮ ಕೈಲಾದಷ್ಟು ಕೆಲಸ ಮಾಡಿದ್ದೇವೆ. ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಯಾವ ನಾಯಕರು ಕೆಲಸ ಮಾಡಿಲ್ಲ ಎಂದು ಹೇಳಿದರು. [ಮಂಡ್ಯದಲ್ಲಿ ಸೇಡು ತೀರಿಸಿಕೊಂಡ ಪುಟ್ಟರಾಜು]
ಬೆಂಗಳೂರಿನ ಮುಖಂಡರಿಂದಾಗಿ ಮಂಡ್ಯದಲ್ಲಿ ಭಿನ್ನಮತ ಭುಗಿಲೆದ್ದಿದೆ ಎಂದು ಹೇಳಿದ ಶಿವರಾಮೇಗೌಡ, ಈ ಬಗ್ಗೆ ಪಕ್ಷದ ವರಿಷ್ಠರಿಗೆ ವರದಿ ನೀಡುತ್ತೇವೆ. ರಮ್ಯಾ ಅವರ ಸೋಲಿಗೆ ಏನು ಕಾರಣ ಎಂದು ತನಿಖೆ ನಡೆಸಲಿ, ನಾವು ತಪ್ಪು ಮಾಡಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.