ಅಂಬಿ ರಾಜಕೀಯ ಎಂಟ್ರಿ ವಿವಾದಕ್ಕೆ ರಮ್ಯಾ ಮಂಗಳ
ಮಂಡ್ಯ, ಮಾರ್ಚ್ 11: ಮಾಜಿ ನಟಿ, ಮಂಡ್ಯ ಸಂಸದೆ ರಮ್ಯಾ ಅವರು ಇತ್ತೀಚೆಗೆ ತಾವೇ ಸೃಷ್ಟಿಸಿದ್ದ ಗೊಂದಲ/ ವಿವಾದಕ್ಕೆ ತೆರೆ ಎಳೆದಿದ್ದಾರೆ. 'ಅಂಬಿ ಅಂಕಲ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದೇ ನಮ್ಮ ತಂದೆ' ಎಂದು ಕೆಆರ್ ಪೇಟೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮುಂದೆ ಹೇಳಿದ್ದ ರಮ್ಯಾ, ಎಂದಿನಂತೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿ ವಿವಾದಕ್ಕೂ ತಮಗೂ ಇನ್ನು ಸಂಬಂಧವಿಲ್ಲ. ಅದು ಮುಗಿದ ವಿಷಯ ಎಂದಿದ್ದಾರೆ.
ಇನ್ನು
ಹಾಸ್ಪೆಟಿಲಿನಲ್ಲಿ
ಚಿಕಿತ್ಸೆಗೆಂದು
ಅಡ್ಮಿಟ್
ಆಗಿರುವ
ಅಂಬರೀಷ್
ಅವರ
ದೇಹದಲ್ಲಿ
12
ಲೀಟರ್
ನೀರು
ತುಂಬಿಕೊಂಡಿದೆ
ಎಂದು
ತಾವು
ಈ
ಹಿಂದೆ
ನೀಡಿದ್ದ
ಹೇಳಿಕೆ
ಬಗ್ಗೆ
ಮಾತನಾಡಿದ
ರಮ್ಯಾ,
ಅಂಬರೀಷ್
ಅವರ
ಆರೋಗ್ಯ
ಸ್ಥಿತಿ
ಬಗ್ಗೆ
ನನಗೆ
ಏನು
ತಿಳಿದಿದೆಯೋ
ಅದನ್ನೇ
ಹೇಳಿರುವೆ.
ಅವರ
ಆರೋಗ್ಯದ
ಬಗ್ಗೆ
ನಾನು
ಇಲ್ಲಸಲ್ಲದ್ದನ್ನು
ಹೇಳಿಲ್ಲ.
ನನ್ನ
ಹೇಳಿಕೆಯಿಂದ
ಅಂಬರೀಶ್
ಅವರ
ಅಭಿಮಾನಿಗಳಿಗೆ
ನೋವುಂಟಾಗಿದ್ದರೆ
ಕ್ಷಮೆ
ಕೋರುತ್ತೇನೆ.
ಮುಂದಿನ
ದಿನಗಳಲ್ಲಿ
ಈ
ರೀತಿ
ಆಗದಂತೆ
ಎಚ್ಚರವಹಿಸುತ್ತೇನೆ'
ಎಂದು
ಹೇಳಿದರು.
ಇದೇ ವೇಳೆ, 'ಅಂಬರೀಷ್ ಅವರು ರಾಜಕೀಯಕ್ಕೆ ಬಂದಿದ್ದು ಜೆಡಿಎಸ್ ಪಕ್ಷದಿಂದ ಎಂಬುದು ನನಗೂ ಗೊತ್ತಿದೆ. ಅದೇನೇ ಇರಲಿ ಅಂಬರೀಷ್ ಅವರ ಮಾರ್ಗದರ್ಶನದಲ್ಲೇ ನಾನು ಮುಂದಿನ ಹೆಜ್ಜೆ ಇಡುತ್ತೇನೆ. ಇಂತಹ ವಿವಾದಗಳು ಮನಸ್ಸಿಗೆ ಬೇಸರವನ್ನು ಉಂಟು ಮಾಡಿವೆ. ನನ್ನ ಏಳಿಗೆ ಸಹಿಸಲಾಗದೆ ನಡೆಸಿರುವ ಅಪಪ್ರಚಾರ ಇದಾಗಿದೆ' ಎಂದು ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೂ ನನ್ನಿಂದ ತಪ್ಪಾಗಿದ್ದಲ್ಲಿ ದಯವಿಟ್ಟು ಕ್ಷಮಿಸುವಂತೆ ಅಂಬರೀಷ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವೆ ಎಂದು ಸಂಸದೆ ರಮ್ಯಾ ಮತ್ತೆ ಮತ್ತೆ ಹೇಳಿದರು.
ಇದೇ ವೇಳೆ ನುಗ್ಗಹಳ್ಳಿ ಗ್ರಾಮದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ 7 ವರ್ಷದ ಬಾಲಕಿ ರಕ್ಷಿತಾ ನಿವಾಸಕ್ಕೆ ಸಂಸದೆ ರಮ್ಯಾ, ಶಾಸಕ ಕೆಎಸ್ ಪುಟ್ಟಣ್ಣಯ್ಯ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.