ರಾಜ್ಯದ ಮೂರು ಕಡೆ ಲೋಕಾಯುಕ್ತ ದಾಳಿ
ಬೆಂಗಳೂರು, ಮೇ 30 : ಗುರುವಾರ ಐದು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ 15 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದ ಲೋಕಾಯುಕ್ತರು, ಶುಕ್ರವಾರವೂ ರಾಜ್ಯದ ಮೂರು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಆಲೂರು ಉಪ ತಹಶೀಲ್ದಾರ್ ಹೊಂಬೇಗೌಡ, ಬಳ್ಳಾರಿಯಲ್ಲಿ ಸಹಾಯಕ ಅಭಿಯಂತರ ಯೂನಿಸ್ ಪಾಷ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ
ಲೋಕಾಯುಕ್ತರು
ಅಪೆಕ್ಸ್
ಮತ್ತು
ಶಿವಮೊಗ್ಗ
ಡಿಸಿಸಿ
ಬ್ಯಾಂಕ್
ಅಧ್ಯಕ್ಷ
ಆರ್.ಎಂ.ಮಂಜುನಾಥ
ಗೌಡ,
ಬಳ್ಳಾರಿಯಲ್ಲಿ
ಕೆಎಎಸ್ಎಸ್
ಬಿ
ಸಹಾಯಕ
ಅಭಿಯಂತರ
ಯೂನಿಸ್
ಪಾಷ,
ಹಾಸನದಲ್ಲಿ
ಉಪ
ತಹಶೀಲ್ದಾರ್
ಹೊಂಬೇಗೌಡ
ಅವರ
ಮನೆಗಳ
ಮೇಲೆ
ದಾಳಿ
ನಡೆಸಲಾಗಿದೆ.
ಮಂಜುನಾಥ ಗೌಡರು ಅಪೆಕ್ಸ್ ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ದಾಳಿ ಪೂರ್ಣಗೊಂಡ ಬಳಿಕ ಲೋಕಾಯುಕ್ತರು ಪತ್ರಿಕಾಗೋಷ್ಠಿ ನಡೆಸಿ ಹೆಚ್ಚಿನ ವಿವರ ನೀಡಲಿದ್ದಾರೆ.
ಹಾಸನ : ಹಾಸನದ ಹೇಮಾವತಿ ನಗರದಲ್ಲಿರುವ ಆಲೂರು ಉಪ ತಹಶೀಲ್ದಾರ್ ಹೊಂಬೇಗೌಡ ಅವರ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಬಳ್ಳಾರಿ : ಬಳ್ಳಾರಿಯಲ್ಲಿ ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಯೂನಿಸ್ ಪಾಷ ಅವರ ಮನೆಯ ಮೇಲೆ ಎಸ್ಪಿ ಶ್ರೀಧರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.