ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ10: ರಾಜ್ಯದಲ್ಲಿ ಮತ್ತೊಂದು ಲೋಕಾಯುಕ್ತ ಬೇಟೆ

By Srinath
|
Google Oneindia Kannada News

lokayukta-police-ride-on-6-corrupt-govt-officials-june-10-adgp-satyanarayana-rao
ಬೆಂಗಳೂರು, ಜೂನ್ 10: ಲೋಕಾಯುಕ್ತ ಪೊಲೀಸರು ರಾಜ್ಯದಲ್ಲಿ ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಬೆಳಗಾವಿ ಹಾಗೂ ಉಡುಪಿಯಲ್ಲಿ ಮಂಗಳವಾರ ಬೆಳಗ್ಗೆಯೇ 6 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮೂರು ಕಡೆ ಬಿಡಿಎ ಸಹಾಯಕ ಇಂಜಿನಿಯರ್ ಲಕ್ಷ್ಮೀನರಸಿಂಹಯ್ಯ, ಬೆಂಗಳೂರು ಉತ್ತರ ಆಹಾರ ನಿರೀಕ್ಷಕ ನಂಜುಂಡಯ್ಯ, ಅರಣ್ಯ ಭವನ ಎಸಿಎಫ್ ಎನ್ಎಸ್ ರವಿಕುಮಾರ್ ಲೋಕಾ ಬಲೆಗೆ ಬಿದ್ದಿದ್ದಾರೆ.

ಹಾಗೆಯೇ ಮಂಡ್ಯದ ಚೆಸ್ಕಾಂ ಲೆಕ್ಕಾಧಿಕಾರಿ ಜಿಟಿ ರಾಮಚಂದ್ರ, ಬೆಳಗಾವಿಯ ಕೃಷಿ ಸಹಕಾರಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ವಿ ಚಂದ್ರಶೇಖರ್ ಹಾಗೂ ಕಾರ್ಕಳ ಪುರಸಭೆಯ ಕಿರಿಯ ಇಂಜಿನಿಯರ್ ಶ್ರೀಧರ್‌ ನಾಯಕ್ ಅವರ ನಿವಾಸಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

English summary
Karnataka Lokayukta police conduct raids on 6 corrupt government officials on June 10 says Lokayukta ADGP Satyanarayana Rao. Details are awaited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X