ಏ.17ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಬೆಂಗಳೂರು, ಏ. 5 : ಲೋಕಸಭೆ ಚುಣಾವಣೆಯ ಮತದಾನ ನಡೆಯುವ ಏಪ್ರಿಲ್ 17 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕೆಂದು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ
ನಡೆಸಿ
ಚುನಾವಣಾ
ಸಿದ್ಧತೆಗಳ
ಕುರಿತು
ಮಾಹಿತಿ
ನೀಡಿದ
ರಾಜ್ಯ
ಮುಖ್ಯಚುನಾವಣಾಧಿಕಾರಿ
ಅನಿಲ್
ಕುಮಾರ್
ಝಾ,
ಮತದಾನ
ಮಾಡಲು
ಕಾರ್ಮಿಕರಿಗೆ
ಅನುಕೂಲವಾಗುವಂತ
ರಜೆ
ನೀಡಲು
ಸೂಚನೆ
ನೀಡಲಾಗಿದೆ.
ಏ.17ರಂದು
ಕಾರ್ಮಿಕರಿಗೆ
ವೇತನ
ಸಹಿತ
ರಜೆ
ಘೋಷಿಸಲು
ಕೈಗಾರಿಕೆ
ಮತ್ತು
ವಾಣಿಜ್ಯ
ಸಂಸ್ಥೆಗಳಿಗೆ
ಸೂಚನೆ
ನೀಡಲಾಗಿದೆ
ಎಂದು
ತಿಳಿಸಿದರು.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
ವಿವಿಪ್ಯಾಟ್ ತಪಾಸಣೆ : ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೊಸದಾಗಿ ಪರಿಚಯಿಸುತ್ತಿರುವ ವಿವಿಪ್ಯಾಟ್ ಯಂತ್ರಗಳ ತಪಾಸಣೆಯನ್ನು ನಡೆಸಿ, ಯಂತ್ರಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಯಿತು ಎಂದು ಅನಿಲ್ ಕುಮಾರ್ ಝಾ ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1925 ಮತಗಟ್ಟೆಗಳಿದ್ದು, ಒಟ್ಟು 19,30,575 ಮತದಾರರಿದ್ದಾರೆ ಎಂದು ಅವರು ತಿಳಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಲೋಕಸಭೆ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ. [ಏನಿದು ವಿವಿಪ್ಯಾಟ್ ಯಂತ್ರ]
ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ನವದೆಹಲಿಯಲ್ಲಿ ಈಗಾಗಲೇ ತರಬೇತಿ ನೀಡಲಾಗಿದ್ದು ಅವರು ಮುಂದಿನ ದಿನಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು. ವೈದ್ಯರು ಹಾಗೂ ದಾದಿಯರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ.
ಗರ್ಭಿಣಿಯರಿಗೆ, ಬಾಣಂತಿಯರಿಗೂ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ ಮತ್ತು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರಿಂದ ಸೂಕ್ತ ಪ್ರಮಾಣ ಪತ್ರ ತಂದು ತೋರಿಸಿದಲ್ಲಿ, ಪರಿಶೀಲಿಸಿ ವಿನಾಯಿತಿ ನೀಡಲಾಗುವುದು ಎಂದರು.
ಚುನಾವಣಾ ಅಕ್ರಮಗಳು : ಬೆಳಗಾವಿ ಜಿಲ್ಲೆಯ ಅಪಾಚಿವೋಡಿಯಲ್ಲಿ 85 ಸಾವಿರ ರೂ., ವಿಜಾಪೂರ ಜಿಲ್ಲೆಯ ಬಾಗೇವಾಡಿಯಲ್ಲಿ 9 ಲಕ್ಷ ರೂ., 63 ಚೀಲ ಜೋಳವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.25 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು ಇದುವರೆಗೆ ಒಟ್ಟು 4.85 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.