560 ಕನ್ನಡಿಗರನ್ನು ಕಾಶ್ಮೀರ ಪ್ರವಾಹದಲ್ಲಿ ರಕ್ಷಿಸಲಾಗಿದೆ
ಬೆಂಗಳೂರು, ಸೆ. 13 : ಜಮ್ಮು ಮತ್ತು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿರುವ 660 ಕನ್ನಡಿಗರ ಪೈಕಿ 560 ಜನರನ್ನು ರಕ್ಷಣೆ ಮಾಡಲಾಗಿದೆ. ಶ್ರೀನಗರ ತಲುಪಿದ ಎಲ್ಲಾ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದ್ದು, ಅವರು ಕರ್ನಾಟಕಕ್ಕೆ ಮರಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ
ಪ್ರಾದೇಶಿಕ
ಆಯುಕ್ತರಾದ
ರಮಣದೀಪ್
ಮತ್ತು
ದೆಹಲಿಯ
ಕರ್ನಾಟಕ
ಭವನದ
ಮೋಹನ್
ಕುಮಾರ್
ಅವರು
ಕಾಶ್ಮೀರದಲ್ಲಿ
ಕನ್ನಡಿಗರನ್ನು
ರಕ್ಷಿಸುವ
ಕಾರ್ಯಾಚರಣೆಯಲ್ಲಿ
ತೊಡಗಿದ್ದಾರೆ.
ರಮಣದೀಪ್
ಅವರು
ಶ್ರೀನಗರದ
ವಿಮಾನ
ನಿಲ್ದಾಣದಿಂದ
ಕನ್ನಡಿಗರನ್ನು
ದೆಹಲಿಗೆ
ಕಳುಹಿಸುವ
ವ್ಯವಸ್ಥೆ
ಮಾಡುತ್ತಿದ್ದಾರೆ.
ಕಾಶ್ಮೀರದಲ್ಲಿ ರಕ್ಷಿಸಲಾದ 80 ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿದ್ದು, ಅವರಿಗೆ ಅಲ್ಲಿ ಆಹಾರ, ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರು ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ಅಥವ ಭಾನುವಾರ ಅವರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಪಿಟಿಐ ಚಿತ್ರ]
ಇದುವರೆಗೂ ಪತ್ತೆಯಾಗದ ಕನ್ನಡಿಗರಿದ್ದರೆ ಅವರ ಬಗೆಗಿನ ಮಾಹಿತಿಯನ್ನು ವಿಪತ್ತು ನಿರ್ವಹಣಾ ಸಹಾಯವಾಣಿಗೆ ನೀಡುವಂತೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಕೆ.ಎಸ್. ಸರೋಜಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ನವ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಬರಲು ನೆರವು ಬೇಕಾದರೆ ಕರ್ನಾಟಕ ಭವನದ ಅಧಿಕಾರಿಗಳಾದ ಸುಪ್ರಸನ್ನ 9868393971 ಮತ್ತು ಶುಂಭುಲಿಂಗಪ್ಪ 9868393989 ಅವರನ್ನು ಸಂಪರ್ಕಿಸಬಹುದಾಗಿದೆ. [ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಕೊಡಿ]
ನವದೆಹಲಿಯಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಕೆ.ವಿ.ರಾಮ 80508313319 ಮತ್ತು ಪ್ರಹ್ಲಾದ್ 9844075683 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.