ಸೋಮವಾರ ಕರ್ನಾಟಕದ ತುಣುಕು ಸುದ್ದಿಗಳು
ಬೆಂಗಳೂರು, ಅ.6 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 5 ಗಂಟೆ : ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರ ವಿರುದ್ಧ ಎಸ್.ಆರ್.ಹಿರೇಮಠ್ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹೊಸಕೋಟೆ ತಾಲೂಕಿನಲ್ಲಿ ಬಚ್ಚೇಗೌಡರು ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ಧಾರವಾಡದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.
ಸಮಯ 4 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ 'ಗಾಂಧಿ ಕನಸು' ಚಿತ್ರ ವೀಕ್ಷಿಸಲು ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ.
ಸಮಯ 3 ಗಂಟೆ : ಸರಕು ಆಮದು ರಫ್ತಿಗೆ ಬಂದಿದ್ದ ಟಗ್ವೊಂದು ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಕಾರವಾರದ ಸಮುದ್ರದಲ್ಲಿ ಸೋಮವಾರ ನಡೆದಿದೆ. ಕೆಜಿ 15 ಎಂಬ ಹೆಸರಿನ ಟಗ್ ಸಮುದ್ರದಲ್ಲಿ ಮುಳುಗಡೆಗೊಂಡಿದ್ದು, ಟಗ್ನಲ್ಲಿದ್ದ ಐವರನ್ನು ರಕ್ಷಿಸಲಾಗಿದೆ.
ಸಮಯ 2 ಗಂಟೆ : ಬೆಂಗಳೂರಿನ ಮುರುಗೇಶ್ ಪಾಳ್ಯದದಲ್ಲಿ ಗುಂಡು ಹಾರಿಸಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಪ್ರಭಾ (51) ಎಂದು ಗುರುತಿಸಲಾಗಿದೆ.
ಸಮಯ
1
ಗಂಟೆ
:
ಚಾಮರಾಜಪೇಟೆ
ಶಾಸಕ
ಜಮೀರ್
ಅಹಮದ್
ಖಾನ್
ಮಾಜಿ
ಸಿಎಂ
ಎಚ್.ಡಿ.ಕುಮಾರಸ್ವಾಮಿ
ಅವರ
ವಿರುದ್ಧ
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಇಂದು
ಈದ್ಗಾ
ಮೈದಾನದಲ್ಲಿ
ನಡೆದ
ಸಾಮೂಹಿಕ
ಪ್ರಾರ್ಥನೆಯಲ್ಲಿ
ಎಚ್ಡಿಕೆ
ಭಾಗವಹಿಸಿರಲಿಲ್ಲ
ಎಂಬುದು
ಜಮೀರ್
ಅಸಮಾಧಾನಕ್ಕೆ
ಪ್ರಮುಖ
ಕಾರಣವಾಗಿದೆ.
ಸಮಯ
12
ಗಂಟೆ
:
ವಿಷ್ಣುವರ್ಧನ್
ಸ್ಮಾರಕ
ನಿರ್ಮಿಸಲು
2
ಎಕರೆ
ಭೂಮಿಯನ್ನು
ನೀಡಲು
ಸರ್ಕಾರ
ನಿರ್ಧರಿಸಿದೆ.
ಸಿಎಂ
ಸಿದ್ದರಾಮಯ್ಯ
ಅಧ್ಯಕ್ಷತೆಯಲ್ಲಿ
ನಡೆದ
ಸಭೆಯಲ್ಲಿ
ಈ
ಕುರಿತು
ಅಂತಿಮ
ನಿರ್ಧಾರ
ಕೈಗೊಳ್ಳಲಾಗಿದೆ.
ಸಭೆಯಲ್ಲಿ
ಭಾರತಿ
ವಿಷ್ಣುವರ್ಧನ್,
ಚಲನಚಿತ್ರ
ವಾಣಿಜ್ಯ
ಮಂಡಳಿ
ಅಧ್ಯಕ್ಷ
ಗಂಗರಾಜು
ಮುಂತಾದವರು
ಪಾಲ್ಗೊಂಡಿದ್ದರು.
ಸಮಯ
11
ಗಂಟೆ
:
ಮೂರು
ಸಾವಿರ
ಮಠದ
ಗುರುಸಿದ್ದ
ರಾಜಯೋಗೀಂದ್ರ
ಸ್ವಾಮೀಜಿ
ಅವರು
ಪೀಠ
ತ್ಯಜಿಸಲು
ನಿರ್ಧರ
ಬೆಳಗಾವಿ
ಮಠದಲ್ಲಿ
ಭಕ್ತರಿಂದ
ಸಭೆ,
ಸ್ವಾಮೀಜಿಗಳ
ಮನವೊಲಿಸುವ
ಬಗ್ಗೆ
ಚರ್ಚೆ.
[ಏನಿದು
ಮಠದ
ವಿವಾದ]
ಸಮಯ 10 ಗಂಟೆ : ಸರಣಿ ಹಬ್ಬಗಳು ಮುಗಿದ ಬಳಿಕ ಬೆಂಗಳೂರಿನಲ್ಲಿ ರಾಶಿ-ರಾಶಿ ಕಸ ಸಂಗ್ರಹಣೆಯಾಗಿದೆ. ಬಿಬಿಎಂಪಿ ಮೇಯರ್ ಎನ್. ಶಾಂತಕುಮಾರಿ ಮತ್ತು ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರು ಕಸ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಲು ನಗರದ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ಸಮಯ 9 ಗಂಟೆ : ಎಚ್.ಡಿ.ಕೋಟೆ ತಾಲೂಕಿನ ಕಂಚನಹಳ್ಳಿಯಲ್ಲಿ ಗೃಹ ರಕ್ಷಕ ಸಿಬ್ಬಂದಿಯನ್ನು ಕೊಲೆ ಮಾಡಲಾಗಿದೆ. ಕೊಲೆಯಾದವರನ್ನು ಪ್ರಿಯಾಂಕ (24) ಎಂದು ಗುರುತಿಸಲಾಗಿದೆ.
ಸಮಯ
8.15
:
ಮಾಜಿ
ಸಿಎಂ
ಜಗದೀಶ್
ಶೆಟ್ಟರ್
ಪುತ್ರ
ಹಾಗೂ
ತೋಟಗಾರಿಕಾ
ಸಚಿವ,
ಕಾಂಗ್ರೆಸ್
ನಾಯಕ
ಶಾಮನೂರು
ಶಿವಶಂಕರಪ್ಪ
ಮೊಮ್ಮಗಳ
ವಿವಾಹ
ನಿಶ್ಚಯವಾಗಿದ್ದು,
ಇಂದು
ಹುಬ್ಬಳ್ಳಿಯಲ್ಲಿ
ಬೀಗರೂಟ
ನಡೆಯಲಿದೆ.
ವಿವಾಹ
ನಿಶ್ಚಯದ
ಮಾತುಕತೆ
ಸಂಪ್ರದಾಯದಂತೆ
ಇಂದು
ನಡೆಯಲಿದ್ದು,
ಹುಬ್ಬಳ್ಳಿಯ
ಮಧುರಾ
ಕಾಲೋನಿಯ
ಶೆಟ್ಟರ್
ನಿವಾಸದಲ್ಲಿ
ಕಾರ್ಯಕ್ರಮ
ಆಯೋಜಿಸಲಾಗಿದೆ.
ಸಮಯ 8 ಗಂಟೆ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಬಾಂಧವರು ಭಾನುವಾರ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರ ಬಕ್ರೀದ್ ಆಚರಣೆ ಮಾಡುವುದರಿಂದ ರಾಜ್ಯ ಸರ್ಕಾರ ಇಂದು ಸರ್ಕಾರಿ ರಜೆ ಘೋಷಣೆ ಮಾಡಿದೆ.