ಬುಧವಾರದ ಸಚಿವ ಸಂಪುಟ ಸಭೆಯ ನಿರ್ಣಯಗಳು
ಬೆಂಗಳೂರು, ಜು. 24 : ಬೆಳಗಾವಿಯ ಸುವರ್ಣ ವಿಧಾನ ಸೌಧ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧ ಕಟ್ಟಡದ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಯಿತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಿದ್ದಾರೆ.
ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಮೊದಲು 140 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ವೆಚ್ಚ 300 ಕೋಟಿಯಾಗಿತ್ತು. ಆದ್ದರಿಂದ ಈ ಕುರಿತು ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ವರದಿ ನೀಡಿದ ಬಳಿಕ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು
ಸುವರ್ಣ ಸೌಧ ನಿರ್ಮಾಣದ ವೆಚ್ಚದ ಬಗ್ಗೆ ತನಿಖೆ
ಬೆಳಗಾವಿಯ ಸುವರ್ಣವಿಧಾನ ಸೌಧ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಟ್ಟಡ ನಿರ್ಮಾಣಕ್ಕೆ ಮೊದಲು 140 ಕೋಟಿ ವೆಚ್ವವಾಗಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕಟ್ಟಡ ಪೂರ್ಣಗೊಳ್ಳುವ ವೇಳೆಗೆ ಅದರ ಮೊತ್ತ 300 ಕೋಟಿಯಾಗಿತ್ತು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಪಟ್ಟಣ ಪಂಚಾಯಿತಿಗಳು ಪುರಸಭೆ
ಅಫಜಲ್ ಪುರ, ಚಿಂಚೋಳಿ, ಜೇವರ್ಗಿ, ಪಾಂಡವಪುರ, ಹುನಗುಂದ, ಅಂಕೋಲ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಪುರಸಭೆಗಳು ನಗರಸಭೆಯಾಗಿ ಪರಿವರ್ತನೆ
ಚಳ್ಳಕೆರೆ, ಅರಸೀಕೆರೆ, ಸುರಪುರ, ಶಹಾಪುರ ಪುರಸಭೆಗಳನ್ನು ನಗರಸಭೆಗಳಾಗಿ ಉನ್ನತೀಕರಿಸಲು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಿಇಓಗಳಿಗೆ ಹೆಚ್ಚಿನ ಅಧಿಕಾರ
ಸ್ಥಳೀಯ ಆಡಳಿತದಲ್ಲಿ ಕಟ್ಟುನಿಟ್ಟು ಕ್ರಮ ಜಾರಿ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬಿ, ಸಿ, ಡಿ ದರ್ಜೆಯ ನೌಕರರು ತಪ್ಪುಮಾಡಿದಾಗ ಅಮಾನತು ಶಿಕ್ಷೆಯೂ ಸೇರಿದಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಸಿಇಒಗಳ ಅಧಿಕಾರ ವ್ಯಾಪ್ತಿ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆಯ ಇತರ ನಿರ್ಣಯಗಳು
*
ವಿಜಾಪುರ
ಜಿಲ್ಲೆಯ
ಕೂಡಗಿಯಲ್ಲಿ
ನಿರ್ಮಾಣಗೊಳ್ಳುತ್ತಿರುವ
ಎನ್ಟಿಪಿಸಿ
ವಿದ್ಯುತ್
ಸ್ಥಾವರಕ್ಕೆ
ಬೇನಾಳ
ಗ್ರಾಮದಲ್ಲಿ
ಕೃಷ್ಣಾ
ಭಾಗ್ಯ
ಜಲ
ನಿಗಮಕ್ಕೆ
ಸೇರಿದ
6.05
ಎಕರೆಯನ್ನು
ಗುತ್ತಿಗೆ
ಆಧಾರದಲ್ಲಿ
ನೀಡುವುದು.
*
ಐಈಬಿಆರ್
ಯೋಜನೆಯಡಿ
2014-15
ನೇ
ಸಾಲಿನಲ್ಲಿ
400
ಕೋಟಿ
ರೂ.
ಮಾರುಕಟ್ಟೆ
ಬಾಂಡ್
ಸಂಗ್ರಹಿಸಲು
ಕಾವೇರಿ
ನೀರಾವರಿ
ನಿಗಮಕ್ಕೆ
ಅವಕಾಶ
ನೀಡುವುದು.
*
ಎಲ್ಲಾ
ಗ್ರಾಮಗಳಿಗೆ
ಶಾಶ್ವತ
ಕುಡಿಯುವ
ನೀರು
ಪೂರೈಕೆ
ಯೋಜನೆಗಾಗಿ
45,000
ಕೋಟಿ
ಮೊತ್ತದ
ಯೋಜನೆಗೆ
ತಾತ್ವಿಕ
ಒಪ್ಪಿಗೆ.