ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಬೇಕು
ಬೆಂಗಳೂರು, ಜು. 16 : "ಅತ್ಯಾಚಾರಿಗಳನ್ನು ಪತ್ತೆ ಹಚ್ಚಿ, ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಆಗ, ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಲು ಸಾಧ್ಯ" ಎಂದು ಶಾಸಕ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಯುವತಿ ಅತ್ಯಾಚಾರ ಪ್ರಕರಣವನ್ನು ಪಕ್ಷಬೇಧ ಮರೆತು ಎಲ್ಲಾ ಶಾಸಕರು ಖಂಡಿಸಿದ್ದಾರೆ.
ಬುಧವಾರದ
ವಿಧಾನಸಭೆ
ಕಲಾಪ
ಆರಂಭವಾಗುತ್ತಿದ್ದಂತೆ
ಸದನಲ್ಲಿ
ಚಲಿಸುವ
ಕಾರಿನಲ್ಲಿ
ಯುವತಿ
ಮೇಲೆ
ಅತ್ಯಾಚಾರ
ನಡೆದ
ಘಟನೆಯನ್ನು
ಪ್ರಸ್ತಾಪಿಸಿದ
ಬಿಜೆಪಿ
ಶಾಸಕ
ಆರ್.ಅಶೋಕ್,
ಈ
ಕುರಿತು
ಚರ್ಚೆ
ನಡೆಸಲು
ಅವಕಾಶ
ಮಾಡಿಕೊಡಬೇಕು
ಎಂದು
ಸ್ಪೀಕರ್
ಕಾಗೋಡು
ತಿಮ್ಮಪ್ಪ
ಅವರಿಗೆ
ಮನವಿ
ಮಾಡಿದರು.
[ಬೆಂಗಳೂರು
:
ಚಲಿಸುವ
ಕಾರಿನಲ್ಲಿ
ಅತ್ಯಾಚಾರ]
ಎಲ್ಲಾ ಶಾಸಕರು ಅಶೋಕ್ ಮಾತಿಗೆ ಧ್ವನಿಗೂಡಿಸಿ ಪಕ್ಷಬೇಧ ಮರೆತು ಘಟನೆಯನ್ನು ಖಂಡಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಸಹ ಘಟನೆಯನ್ನು ಖಂಡಿಸಿದರು. ಆದರೆ, ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಲಿಲ್ಲ. [ಮಂಗಳವಾರದ ಸದನದಲ್ಲಿ ಏನಾಯ್ತು?]
ಈ ಬಗ್ಗೆ ಸದನಸಲ್ಲಿ ಹೇಳಿಕೆ ನೀಡಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಶಾಸಕ ರಮೇಶ್ ಕುಮಾರ್ ಅವರು, "ಅತ್ಯಾಚಾರಿಗಳನ್ನು ಪತ್ತೆ ಮಾಡಿ ಗುಂಡಿಕ್ಕಿ ಕೊಲ್ಲಬೇಕು, ಆಗ ಮಾತ್ರ ನಮ್ಮ ಹೆಣ್ಣುಮಕ್ಕಳು ನೆಮ್ಮದಿಯಿಂದ ಇರಲು ಸಾಧ್ಯ" ಎಂದು ಹೇಳಿದರು.