ಬುಧವಾರದ ಕಲಾಪದ ಮುಖ್ಯಾಂಶಗಳು
ಬೆಂಗಳೂರು, ಜು. 9 : ಬೆಂಗಳೂರಿನ ವಿವಿಧ ಸಿದ್ಧ ಉಡುಪು ಕಾರ್ಖನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಬಂಧ ಸಾರಿಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.
ಬುಧವಾರದ
ಕಲಾಪದದಲ್ಲಿ
ಬಿಜೆಪಿಯ
ಸಿ.ಎಚ್.ವಿಜಯಶಂಕರ್
ಅವರ
ಪ್ರಶ್ನೆಗೆ
ಉತ್ತರ
ನೀಡಿದ
ಸಚಿವರು,
ಬೆಂಗಳೂರಿನಲ್ಲಿ
ಹಲವಾರು
ಮಹಿಳೆಯರು
ಗಾರ್ಮೆಂಟ್ಸ್
ಗಳಲ್ಲಿ
ಕೆಲಸ
ಮಾಡುತ್ತಿದ್ದಾರೆ.
ಅವರಿಗೆ
ಬೆಳಗಿನ
ಸಮಯದಲ್ಲಿ
ಕೆಲಸಕ್ಕೆ
ಹೋಗಲು
ಸಾರಿಗೆ
ಸಮಸ್ಯೆ
ಇದೆ.
ಆದ್ದರಿಂದ
ಪ್ರತ್ಯೇಕ
ಸಾರಿಗೆ
ವ್ಯವಸ್ಥೆ
ಕಲ್ಪಿಸುವ
ಕುರಿತು
ಚರ್ಚೆ
ನಡೆಸಲಾಗುವುದು
ಎಂದರು.
ಕೆಲವು ಗಾರ್ಮೆಂಟ್ಸ್ ಗಳು ಮಹಿಳಾ ಕಾರ್ಮಿಕರು ಪಾಳಿಗೆ ಸರಿಯಾಗಿ ಬಂದು ಹೋಗಲು ಉಚಿತವಾಗಿ ಸಾರಿಗೆ ಅನುಕೂಲ ಒದಗಿಸಿವೆ ಮತ್ತು ರಕ್ಷಣಾ ಸಿಬ್ಬಂದಿಯನ್ನು ನೇಮಕಮಾಡಿದ್ದಾರೆ. ಆದರೆ, ಕೆಲವು ಗಾರ್ಮೆಂಟ್ಸ್ ಗಳಲ್ಲಿ ಸರ್ಕಾರ ಸೂಚಿಸಿರುವ ನಿಬಂಧನೆಗಳನ್ನು ಪಾಲಿಸಿಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.[ಮಂಗಳವಾರ ಸದನದಲ್ಲಿ ಏನಾಯ್ತು?]
ಮಳೆನೀರು ಕೊಯ್ಲು ಕಡ್ಡಾಯ : ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತಂದಿದ್ದ ಕಡ್ಡಾಯ ಮಳೆನೀರು ಕೊಯ್ಲು ಯೋಜನೆ ಅಳವಡಿಕೆಯನ್ನು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಮತ್ತು ಹೋಬಳಿ ಮಟ್ಟಕ್ಕೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. [ಕರ್ನಾಟಕದಲ್ಲಿ 52 ವರ್ಷದಲ್ಲೇ ಅತಿ ಕಡಿಮೆ ಮಳೆ]
ಪಿಂಚಣಿ ಬಿಡುಗಡೆಗೆ ಸೂಚನೆ : ಸಂಧ್ಯಾ ಸುರಕ್ಷಾ ಯೋಜನೆಯಡಿ ಉಂಟಾಗಿರುವ ಲೋಪ ದೋಷಗಳನ್ನು ಸರಿಪಡಿಸಲು ಸರ್ಕಾರ ಬದ್ಧ ವಾಗಿದ್ದು, ತಡೆ ಹಿಡಿದಿರುವ ಆರು ತಿಂಗಳ ಬಾಕಿ ಪಿಂಚಣಿಯನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಇ.ಕೃಷ್ಣಪ್ಪ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 65 ವರ್ಷ ದಾಟಿದ ವಯೋವೃದ್ಧರಿಗೆ ಸರ್ಕಾರ ಮಾಸಾಶನ ನೀಡುತ್ತಿದ್ದು, ಕೆಲವು ಕಾರಣಗಳಿಂದ ಅವುಗಳನ್ನು ತಡೆಹಿಡಿಯಲಾಗಿದೆ. ಈ ಬಾಕಿಯನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.